Advertisement

ನನ್ನ ವಿರುದ್ಧ ಅಪಪ್ರಚಾರ: ಎಂ.ಪಿ.ಕುಮಾರಸ್ವಾಮಿ

08:14 PM Feb 14, 2023 | Team Udayavani |

ಮೂಡಿಗೆರೆ: ನಾನು 3 ಬಾರಿ ಶಾಸಕನಾಗಿ ಆಯ್ಕೆಯಾಗಿದ್ದು ಹುದ್ದೆಯಲ್ಲಿದ್ದಾಗಲೇ ಮೂರು ಅಪಘಾತ, ಪ್ರಾಣಾಪಾಯ ಸಂಕಷ್ಟದಿಂದ ಪಾರಾಗಿದ್ದೇನೆಂದು ಶಾಸಕ ಎಂ.ಪಿ.ಕುಮಾರಸ್ವಾಮಿ ಹೇಳಿದರು.

Advertisement

ಮೂಡಿಗೆರೆ ಉತ್ಸವ ಸಮಿತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಾನು ಪ್ರಥಮ ಬಾರಿ ಬೆಂಗಳೂರಿಗೆ ತೆರಳುತ್ತಿದ್ದಾಗ ನನ್ನ ಕಾರು ಲಾರಿಗೆ ಅಪ್ಪಳಿಸಿ ಅಪಘಾತವಾಗಿತ್ತು. 2ನೇ ಬಾರಿ ಕೋವಿಡ್‌ ಆವರಿಸಿ ತೀವ್ರ ಉಸಿರಾಟದ ತೊಂದರೆಯಿಂದ ಬಳಲಿದ್ದೆ.3ನೇ ಬಾರಿ ಕಾಡಾನೆಯಿಂದ ಬಲಿಯಾದ ಮಹಿಳೆಯನ್ನು ನೋಡಲು ತೆರಳಿದ್ದಾಗ ನನ್ನ ಮೇಲೆ ಗ್ರಾಮಸ್ಥರು ಹಲ್ಲೆ ನಡೆಸಿದಾಗ ನನ್ನ ಜೀವ ಉಳಿದಿದ್ದೇ ಹೆಚ್ಚು. ಆದರೂ ನಾನು ಯಾರ ಮೇಲೂ ದೂರು ನೀಡಲಿಲ್ಲ.

ಹಲವರು ಉದ್ದೇಶಪೂರ್ವಕವಾಗಿ ನನ್ನ ವಿರುದ್ಧ ಅಪಪ್ರಚಾರ ಮಾಡುತ್ತಿದ್ದಾರೆ. ಜನ ಸೇವೆಗಾಗಿ ನಾನು ಎಂಥ ನೋವು ಬೇಕಾದರೂ ಅನುಭವಿಸಲು ಸಿದ್ಧ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next