Advertisement

ಮೇಲ್ಮನೆಗೆ ಬಿಜೆಪಿಯದ್ದೇ ಬಹುಮತ: ಪ್ರಮೋದ

02:39 PM Dec 07, 2021 | Team Udayavani |

ಶಿರಸಿ: ಮೇಲ್ಮನೆಗೆ ಬಿಜೆಪಿಯದ್ದೇ ಬಹುಮತ ಆಗಲಿದೆ. ರಾಜ್ಯದಲ್ಲಿ 16 ಸ್ಥಾನ‌ ಕನಿಷ್ಠ ಗೆಲ್ಲಲಿದೆ ಎಂದು‌ ಪಂಚಾಯತ್ ರಾಜ್ ವಿಕೇಂದ್ರೀಕರಣ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಪ್ರಮೋದ ಹೆಗಡೆ ಯಲ್ಲಾಪುರ ಹೇಳಿದರು.

Advertisement

ಅವರು ಸೋಮವಾರ‌ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಟಿ ‌ನಡೆಸಿ ಮಾತನಾಡಿ, ವಿಧಾನ ಪರಿಷತ್‍ನಲ್ಲಿ 75ರಲ್ಲಿ 26 ಜನ ಇದ್ದಾರೆ. ವಿಧಾನ ಪರಿಷತ್ ಬಹುಮತಕ್ಕೆ ಬೇಕಾದ 12 ದಾಟುತ್ತೇವೆ. ಮೇಲ್ಮನೆ ಮುಖ್ಯ ಕೆಲಸ ‌ಕಾಯಿದೆ ಬದ್ದತೆ ಚರ್ಚೆ ಆಗಬೇಕಿದೆ. ಅದಕ್ಕೆ ಒಳ್ಳೆಯ ಪ್ರತಿಪಾದನೆ ಮಾಡಬೇಕಾಗುತ್ತದೆ. ಅದಕ್ಕಾಗಿ ಬಿಜೆಪಿ ಗೆಲ್ಲಿಸಬೇಕಿದೆ. ಸರಕಾರಕ್ಕೆ ಬಹುಮತ ಸಾಧನೆ ಮಾಡುತ್ತೇವೆ ಎಂದರು.

ವಿಕೇಂದ್ರೀಕರಣ ಸಂಪೂರ್ಣ ಅಪಕೀರ್ತಿ ಕಾಂಗ್ರೆಸ್ಸಿಗೆ ಬರುತ್ತದೆ. ಪಂಚಾಯತ್ ಅನ್ನು ನಿರ್ವೀರ್ಯ ಕಾಂಗ್ರೆಸ್ ಮಾಡಿದೆ. ಚುನಾವಣೆಗೆ ಸ್ಪರ್ಧಿಸಲು ನೈತಿಕ ಹಕ್ಕು ಕಾಂಗ್ರೆಸ್ ಗೆ ಇಲ್ಲ. ವ್ಯವಸ್ಥೆ ಸರಿಮಾಡಲು‌ ವಿಕೇಂದ್ರೀಕರಣ ವ್ಯವಸ್ಥೆಗೆ‌ ಈಶ್ವರಪ್ಪ, ಯಡಿಯೂರಪ್ಪ ಅವರ ಕಾರಣದಿಂದ ಗ್ರಾಮ ಸರಕಾರ ಆಗಿದೆ ಎಂದರು.

ಈ ಸಂದರ್ಭ ಪ್ರಮುಖರಾದ ನರಸಿಂಹ ಭಟ್ಟ, ಸದಾನಂದ ಭಟ್ಟ, ಡಾನಿ‌ ಡಿಸೋಜ, ನಾಗರಾಜ್‌ ನಾಯ್ಕ, ಶ್ರೀರಾಮ ನಾಯ್ಕ ರಾಕೇಶ ತಿರುಮಲ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next