Advertisement

ಬಿಜೆಪಿ ನಾಯಕರ ಗಲ್ಲಿಗೇರಿಸಿ: ಕೈ ನಾಯಕ

06:25 AM Dec 28, 2018 | Team Udayavani |

ಜಮ್ಮು: “ಬಿಜೆಪಿ ನಾಯಕರನ್ನು ಗಲ್ಲಿಗೇರಿಸಬೇಕು. ಭಯೋತ್ಪಾದನೆಯ ಹೆಸರಿನಲ್ಲಿ ಅಸು ನೀಗಿದ ಮುಗ್ಧ ಉಗ್ರರ ಕುಟುಂಬ ಸದಸ್ಯ ರಿಗೆ ಸರಕಾರಿ ಉದ್ಯೋಗ ನೀಡಬೇಕು’ ಹೀಗೆಂದು ಜಮ್ಮು ಮತ್ತು ಕಾಂಗ್ರೆಸ್‌ನ ಹಿರಿಯ ನಾಯಕರೊಬ್ಬರು ಹೇಳಿದ್ದಾರೆ.

Advertisement

ಕಣಿವೆ ರಾಜ್ಯದ ಕಾಂಗ್ರೆಸ್‌ನ ಅಲ್ಪಸಂಖ್ಯಾಕ ಘಟಕದ ವೀಕ್ಷಕ ಹಾಜಿ ಸಗೀರ್‌ ಸಯೀದ್‌ ಖಾನ್‌ ಈ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಉದ್ಯೋಗದ ಜತೆಗೆ 1 ಕೋಟಿ ರೂ. ನೆರವು ನೀಡಲಾಗುತ್ತದೆ ಎಂದು ಹೇಳಿದ್ದಾರೆ. 

ಜಮ್ಮು ಮತ್ತು ಕಾಶ್ಮೀರದಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ಈ ವಾಗ್ಧಾನ ಈಡೇರಿಸುತ್ತೇವೆ ಎಂದಿದ್ದಾರೆ ಅವರು. ಬಿಜೆಪಿ ನೇತೃತ್ವದ ಅವಧಿಯಲ್ಲಿ ಕಾಶ್ಮೀರ ಎನ್ನುವುದು ಕೊಲ್ಲಲು ಇರುವ ಸ್ಥಳ ಎನ್ನು ವಂತೆ ಮಾರ್ಪಾಡಾಗಿದೆ ಎಂದು ಟೀಕಿಸಿದ್ದಾರೆ. ಈ ಹೇಳಿಕೆಯನ್ನು ಜಮ್ಮು ಮತ್ತು ಕಾಶ್ಮೀರ ಪ್ರದೇಶ ಕಾಂಗ್ರೆಸ್‌ ಸಮಿತಿ ತಿರ ಸ್ಕರಿಸಿದೆ. ಖಾನ್‌ಗೆ ಆ ರೀತಿಯ ಹೇಳಿಕೆ ನೀಡಲು ಯಾವುದೇ ಅಧಿಕಾರವಿಲ್ಲ ಎಂದಿದೆ. ಖಾನ್‌ಗೆ ನೇರವಾಗಿ ರಾಹುಲ್‌ ಗಾಂಧಿ ಯವರದ್ದೇ ಆಶೀರ್ವಾದ ಇದೆ. ಹೀಗಾಗಿ, ಪ್ರದೇಶ ಕಾಂಗ್ರೆಸ್‌ ನಾಯಕತ್ವದ ಅನುಮತಿ ಏಕೆ ಬೇಕು ಎಂದು ಬಿಜೆಪಿ ಪ್ರಶ್ನೆ ಮಾಡಿದೆ.

Advertisement

Udayavani is now on Telegram. Click here to join our channel and stay updated with the latest news.

Next