Advertisement

BJP ನಾಯಕ ರಂಜಿತ್‌ ಹತ್ಯೆ: 15 ಪಿಎಫ್ಐ ಸದಸ್ಯರು ದೋಷಿಗಳು

08:32 AM Jan 21, 2024 | Pranav MS |

ಅಲಪ್ಪುಳ: 2021ರ ಡಿಸೆಂಬರ್‌ನಲ್ಲಿ ನಡೆದ ಬಿಜೆಪಿ ಒಬಿಸಿ ಘಟಕದ ನಾಯಕ ರಂಜಿತ್‌ ಶ್ರೀನಿವಾಸನ್‌ ಹತ್ಯೆಗೆ ಸಂಬಂಧಿಸಿ ನಿಷೇಧಿತ ಪಾಪ್ಯುಲರ್‌ ಫ್ರಂಟ್‌ ಆಫ್ ಇಂಡಿಯಾದ 15 ಕಾರ್ಯಕರ್ತರನ್ನು ಕೇರಳದ ಕೋರ್ಟ್‌ ಶನಿವಾರ ದೋಷಿಗಳೆಂದು ತೀರ್ಪು ನೀಡಿದೆ. ಮಾವೆಲಿಕ್ಕಾರಾದ ಹೆಚ್ಚುವರಿ ಜಿಲ್ಲಾ ಸೆಷನ್ಸ್‌ ನ್ಯಾಯಾಲಯ ಈ ತೀರ್ಪು ನೀಡಿದ್ದು, ಸೋಮವಾರ ಅಪರಾಧಿಗಳ ಶಿಕ್ಷೆ ಪ್ರಮಾಣವನ್ನು ನಿಗದಿಪಡಿಸಲಿದೆ

Advertisement

. ಅಲಪ್ಪುಳದಲ್ಲಿ 2021ರ ಡಿ.18ರಂದು ಎಸ್‌ಡಿಪಿಐ ನಾಯಕ ಕೆ.ಎಸ್‌.ಶಾನ್‌ರನ್ನು ಗ್ಯಾಂಗ್‌ವೊಂದು ಹತ್ಯೆಗೈದಿತ್ತು. ಇದಾದ ಕೆಲವೇ ಗಂಟೆಗಳಲ್ಲಿ ರಂಜಿತ್‌ ಮನೆಗೆ ನುಗ್ಗಿದ್ದ ಪಿಎಫ್ಐ, ಎಸ್‌ಡಿಪಿಐ ಗ್ಯಾಂಗ್‌ ಕುಟುಂಬದೆದುರೇ ಕೊಲೆಗೈದಿತ್ತು.

Advertisement

Udayavani is now on Telegram. Click here to join our channel and stay updated with the latest news.

Next