Advertisement

ಬಿಜೆಪಿ ಮುಖಂಡನ ಕೊಲೆ: ಮತ್ತೂಬ್ಬ ಆರೋಪಿಯ ಸೆರೆ

11:53 AM Mar 18, 2017 | Team Udayavani |

ಆನೇಕಲ್‌: ಕಳೆದ ಮಂಗಳವಾರ ಕೊಲೆಯಾಗಿದ್ದ ಬಿಜೆಪಿ ಮುಖಂಡ ವಾಸು ಕೊಲೆ ಪ್ರಕರಣದಲ್ಲಿ ಮತ್ತೂಬ್ಬ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಸತೀಶ್‌ ಬಂಧಿತ ಆರೋಪಿ. ಈ ಹಿಂದೆ ಪೊಲೀಸರು ಐದು ಜನ ಆರೋಪಿಗಳನ್ನು ಬಂಧಿಸಿದ್ದು, ಸತೀಶ್‌ ಬಂಧನದ ಮೂಲಕ ಬಂಧಿತ ಆರೋಪಿಗಳ ಸಂಖ್ಯೆ ಆರಕ್ಕೆ ಏರಿದೆ.

Advertisement

ಸತೀಶ್‌ ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲೂಕಿನ ಬೊವಿಕಟ್ಟಿ  ಗ್ರಾಮದಲ್ಲಿರುವ ಬಗ್ಗೆ ದೊರೆತ ಖಚಿತ ಮಾಹಿತಿ ಆಧರಿಸಿ, ಗ್ರಾಮಕ್ಕೆ ತೆರಳಿದ ಹೊಸಕೋಟೆ ಪಿಎಸ್‌ಐ ರಂಗಸ್ವಾಮಿ ನೇತೃತ್ವದ ತಂಡ, ಆರೋಪಿಯನ್ನು ಬಂಧಿಸಿ ಕರೆತರುವಲ್ಲಿ ಯಶಸ್ವಿಯಾಗಿದೆ. ಈ ಹಿಂದೆ ಸರೋಧಿಜಮ್ಮ, ಮಧು, ನಾರಾಯಣಸ್ವಾಮಿ, ಮಂಜ, ಮುರಳಿ ಎಂಬ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದರು.

ಕೊಲೆಗೆ ಬಳಸಿದ್ದ ಕ್ವಾಲಿಸ್‌ ಪತ್ತೆ
ಹೊಸಕೋಟೆ:
ರಾಷ್ಟ್ರೀಯ ಹೆದ್ದಾರಿ 75ರ ಸುಲ್ತಾನ್‌ ಪ್ಯಾಲೇಸ್‌ ಬಳಿ ಬೊಮ್ಮಸಂದ್ರದ ಪುರಸಭೆ ಸದಸ್ಯ ಶ್ರೀನಿವಾಸ್‌ ಎಂಬುವರ ಕೊಲೆಗೆ ಬಳಸಿದ್ದ ಕ್ವಾಲಿಸ್‌ ವಾಹನ ಪತ್ತೆಯಾಗಿದೆ. ದುಷ್ಕರ್ಮಿಗಳು ಸ್ಥಳದಲ್ಲಿ ವಾಹನವನ್ನು ಬಿಟ್ಟು ಪರಾರಿಯಾಗಿದ್ದು ಪೊಲೀಸರು ವಶಪಡಿಸಿಕೊಳ್ಳಲಾಗಿದೆ. ವಾಹನದ ನೋಂದಣಿ ಸಂಖ್ಯೆ ಆಧರಿಸಿ ಮಾಲೀಕರ ಪತ್ತೆಗೆ ಕ್ರಮ ಕೈಗೊಂಡಿದ್ದು ಪ್ರಕರಣ ದಾಖಲಾಗಿರುವ ಠಾಣೆಗೆ ವಾಹನವನ್ನು ಹಸ್ತಾಂತರಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next