Advertisement

BJP ಕಾರ್ಯಕರ್ತರು ಭ್ರಷ್ಟರ ಬೆರಳನ್ನು ಕತ್ತರಿಸಿ ಹಾಕಲಿದ್ದಾರೆ: ಮನೋಜ್‌ ಸಿನ್ಹಾ ಎಚ್ಚರಿಕೆ

09:05 AM Apr 20, 2019 | Team Udayavani |

ಹೊಸದಿಲ್ಲಿ : ಬಿಜೆಪಿ ನಾಯಕ ಮನೋಜ್‌ ಸಿನ್ಹಾ ಅವರು ಬಿಜೆಪಿ ಕಾರ್ಯಕರ್ತರು ತಮ್ಮ ವಿರುದ್ಧ ಯಾವುದೇ ಭ್ರಷ್ಟ ವ್ಯಕ್ತಿ ಬೆರಳೆತ್ತಿದರೂ ಅವರ ಬೆರಳನ್ನು ಕತ್ತರಿಸ ಹಾಕಲಿದ್ದಾರೆ ಎಂದು ನೀಡಿರುವ ಎಚ್ಚರಿಕೆಯ ಮಾತುಗಳು ಈಗ ವೈರಲ್‌ ಆಗಿವೆ.

Advertisement

ಭ್ರಷ್ಟಾಚಾರದಿಂದ ಹಣ ಸಂಪಾದಿಸಿ ಅದನ್ನು ಮತದಾರರಿಗೆ ಆಮಿಷ ಒಡ್ಡಲು ಬಳಸುವ ಯಾವುದೇ ವ್ಯಕ್ತಿಗಳನ್ನು ಬಿಜೆಪಿ ಕಾರ್ಯಕರ್ತರು ಬಿಡುವುದಿಲ್ಲ; ತಮ್ಮ ಯಾವುದೇ ಭ್ರಷ್ಟ ವ್ಯಕ್ತಿ ಬೆರಳೆತ್ತಿದಲ್ಲಿ ಅವರು ಆ ಬೆರಳನ್ನೇ ಕತ್ತರಿಸಿ ಹಾಕಲಿದ್ದಾರೆ ಎಂದು ಸಿನ್ಹಾ ಹೇಳಿದ್ದಾರೆ.

ಬಿಜೆಪಿ ಕಾರ್ಯಕರ್ತರ ವಿರುದ್ಧ ಯಾರೂ ಬೆರಳೆತ್ತುವ ದುಸ್ಸಾಹಸ ಮಾಡಿದಲ್ಲಿ ಅವರನ್ನು ಹುಗಿದು ಹಾಕಲಾಗುವುದು ಎಂದು ಸಿನ್ಹಾ ಹೇಳಿರುವ ಮಾತುಗಳು ವ್ಯಾಪಕ ಟೀಕೆ, ಖಂಡನೆಗೆ ಗುರಿಯಾಗಿವೆ.

Advertisement

Udayavani is now on Telegram. Click here to join our channel and stay updated with the latest news.

Next