Advertisement

BJP-JDS: ಸಿಡಿದೆದ್ದ ಸಿ.ಎಂ. ಇಬ್ರಾಹಿಂ- ಬಿಜೆಪಿ ಜತೆಗಿನ ಮೈತ್ರಿ ಒಪ್ಪಲಾರೆ

09:02 PM Oct 16, 2023 | Team Udayavani |

ಬೆಂಗಳೂರು: “ನಮ್ಮದೇ ಅಸಲಿ ಜೆಡಿಎಸ್‌, ನಾನು ಪಕ್ಷದ ರಾಜ್ಯಾಧ್ಯಕ್ಷ. ಬಿಜೆಪಿ ಜತೆಗಿನ ಮೈತ್ರಿಯನ್ನು ಒಪ್ಪುವುದಿಲ್ಲ, ಎನ್‌ಡಿಎಗೆ ನಮ್ಮ ಬೆಂಬಲ ಇಲ್ಲ’ ಎಂದು ಜೆಡಿಎಸ್‌ ರಾಜ್ಯಾಧ್ಯಕ್ಷ ಸಿ.ಎಂ. ಇಬ್ರಾಹಿಂ ಸ್ಪಷ್ಟವಾಗಿ ಹೇಳುವ ಮೂಲಕ ಬಿಜೆಪಿ-ಜೆಡಿಎಸ್‌ ಸ್ನೇಹಕ್ಕೆ ಹೊಸ ತಿರುವು ಕೊಟ್ಟಿದ್ದು, ಮುಂದೇನು ಎಂಬ ಕೌತುಕ ಮೂಡಿದೆ.

Advertisement

ಜೆಡಿಎಸ್‌-ಬಿಜೆಪಿ ಮೈತ್ರಿಯಿಂದ ಮುನಿಸಿಕೊಂಡಿದ್ದ ಸಿ.ಎಂ. ಇಬ್ರಾಹಿಂ ತಮ್ಮ ಮುಂದಿನ ನಡೆ ಬಗ್ಗೆ ಚರ್ಚಿಸಲು ಸೋಮವಾರ ಬೆಂಗಳೂರಿನ ಸಿಎಂಎ ಗ್ರ್ಯಾಂಡ್‌ ಕನ್ವೆನ್ಶನ್‌ ಹಾಲ್‌ನಲ್ಲಿ ಚಿಂತನ-ಮಂಥನ ಸಭೆ ಕರೆದಿದ್ದರು. ಬಿಜೆಪಿ ಜತೆಗಿನ ಮೈತ್ರಿ ಪಕ್ಷದ ತೀರ್ಮಾನ ಅಲ್ಲ; ಎಚ್‌.ಡಿ. ಕುಮಾರಸ್ವಾಮಿಯವರು ಒಬ್ಬರೇ ಹೋಗಿ ವೈಯಕ್ತಿಕವಾಗಿ ಮೈತ್ರಿ ಮಾಡಿಕೊಂಡು ಬಂದಿದ್ದಾರೆ. ಪಕ್ಷವು ಒಂದು ಕುಟುಂಬದ ಸೊತ್ತಲ್ಲ, ಯಾವುದೇ ಕಾರಣಕ್ಕೂ ಜೆಡಿಎಸ್‌ ಪಕ್ಷವು ಎನ್‌ಡಿಎ ಜತೆ ಹೋಗುವುದಿಲ್ಲ ಎಂದು ನಾವು ಸ್ಪಷ್ಟ ತೀರ್ಮಾನ ಮಾಡಿದ್ದೇವೆ ಎಂಬುದಾಗಿ ಸಿ.ಎಂ. ಇಬ್ರಾಹಿಂ ಹೇಳಿದ್ದಾರೆ.

ಕುಮಾರಸ್ವಾಮಿ ಅವರನ್ನು ಉಚ್ಛಾಟಿಸುವ ಬಗ್ಗೆಯೂ ಚರ್ಚೆಯಾಗಿದೆ ಎಂದು ತಿಳಿಸಿದ್ದಾರೆ. ಆದರೆ ಸಭೆಯಲ್ಲಿ ಜೆಡಿಎಸ್‌ನ ಹಾಲಿ ಶಾಸಕರಾಗಲಿ, ಪ್ರಮುಖ ಮಾಜಿಗಳಾಗಲಿ ಇರಲಿಲ್ಲ. ಆದರೆ ಜೆಡಿಯು ಪಕ್ಷದ ಎಂ.ಪಿ. ನಾಡಗೌಡ ಹಾಗೂ ಮಹಿಮಾ ಪಟೇಲ್‌ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next