Advertisement

ನಮ್ಮನ್ನು ಎದುರಿಸಲಾಗದ ಬಿಜೆಪಿ ಸುಳ್ಳು ಆರೋಪಗಳಿಂದ ಹೇಡಿಗಳ ರಾಜಕೀಯ ಮಾಡುತ್ತಿದೆ: ಕಾಂಗ್ರೆಸ್

01:46 PM Nov 06, 2020 | keerthan |

ಬೆಂಗಳೂರು: ಕಾಂಗ್ರೆಸ್ ನಾಯಕರನ್ನು ಸೈದ್ಧಾಂತಿಕವಾಗಿ ಎದುರಿಸಲಾಗದೆ ದಿಕ್ಕುತಪ್ಪಿಸುವ ಸುಳ್ಳು ಆರೋಪಗಳಿಂದ ಹೇಡಿಗಳ ರಾಜಕೀಯ ಮಾಡುವುದು ಬಿಜೆಪಿ ಮೊದಲಿಂದಲೂ ಮೇಲಿನಿಂದ ಕೆಳಗಿನ ನಾಯಕರವರೆಗೂ ರೂಢಿಸಿಕೊಂಡು ಬಂದ ಚಾಳಿ ಎಂದು ಕಾಂಗ್ರೆಸ್ ಆರೋಪ ಮಾಡಿದೆ.

Advertisement

ಈ ಬಗ್ಗೆ ಟ್ವೀಟ್ ಮಾಡಿರುವ ಕರ್ನಾಟಕ ಕಾಂಗ್ರೆಸ್, ಐಎಎಸ್ ಅಧಿಕಾರಿ ಡಿ.ಕೆ ರವಿ ಆತ್ಮಹತ್ಯೆಯಲ್ಲಿ ಕರ್ನಾಟಕ ಬಿಜೆಪಿ ನಾಯಕರು ಸುಳ್ಳಿನ ರಾಜಕೀಯ ಮಾಡಿದರು, ಸಿಬಿಐ ತನಿಖೆಯಲ್ಲಿ ಸತ್ಯ ಗೆದ್ದಿತು. ಡಿವೈಎಸ್ಪಿ ಗಣಪತಿ ಆತ್ಮಹತ್ಯೆಯಲ್ಲಿ ಕುತಂತ್ರ ರಾಜಕೀಯ ಮಾಡಿದರು ಹೈಕೋರ್ಟಿನಲ್ಲಿ ಸತ್ಯ ಗೆದ್ದಿದೆ. ಈಗ ವಿನಯ್ ಕುಲಕರ್ಣಿ ಅವರನ್ನು ಗುರಿಯಾಗಿಸಿದ್ದಾರೆ, ಸತ್ಯ ಗೆಲ್ಲುವ ವಿಶ್ವಾಸವಿದೆ ಎಂದಿದೆ.

ಕಾಂಗ್ರೆಸ್ ನಾಯಕರನ್ನು ಸೈದ್ಧಾಂತಿಕವಾಗಿ ಎದುರಿಸಲಾಗದೆ ದಿಕ್ಕುತಪ್ಪಿಸುವ ಸುಳ್ಳು ಆರೋಪಗಳಿಂದ ಹೇಡಿಗಳ ರಾಜಕೀಯ ಮಾಡುವುದು ಬಿಜೆಪಿ ಮೊದಲಿಂದಲೂ ಮೇಲಿನಿಂದ ಕೆಳಗಿನ ನಾಯಕರವರೆಗೂ ರೂಢಿಸಿಕೊಂಡು ಬಂದ ಚಾಳಿ. ಪ್ರತಿ ಬಾರಿಯೂ ಮುಗ್ಗರಿಸಿ ಬಿದ್ದಿದ್ದಾರೆ, ನ್ಯಾಯ ನಮ್ಮದಾಗಿದೆ ಎಂದು ಕಾಂಗ್ರೆಸ್ ಟ್ವೀಟ್ ಮಾಡಿದೆ.

ಹುಬ್ಬಳ್ಳಿ ಜಿ.ಪಂ ಸದಸ್ಯ ಯೋಗೀಶ್ ಗೌಡ ಕೊಲೆ ಪ್ರಕರಣದ ಸಂಬಂಧ ಮಾಜಿ ಸಚಿವ ವಿನಯ್ ಕುಲಕರ್ಣಿ ಅವರನ್ನು ಸಿಬಿಐ ಪೊಲೀಸರು ಗುರುವಾರ ಬಂಧಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next