Advertisement

CM Siddaramaiah ಕಂಡಲ್ಲೆಲ್ಲ ಕಪ್ಪುಪಟ್ಟಿ ಪ್ರದರ್ಶನಕ್ಕೆ ಬಿಜೆಪಿ ಸಜ್ಜು

12:49 AM Sep 29, 2024 | Team Udayavani |

ಬೆಂಗಳೂರು: ಮುಡಾ ಹಗ ರಣದಲ್ಲಿ ಎಫ್ಐಆರ್‌ ದಾಖಲಾದ ಬಳಿಕವೂ ರಾಜೀನಾಮೆ ನೀಡದಿರುವ ಸಿದ್ದರಾಮಯ್ಯ ವಿರುದ್ಧ ಹೋರಾಟ ತೀವ್ರ ಗೊಳಿಸಲು ನಿರ್ಧರಿಸಿ ರುವ ಬಿಜೆಪಿ ರಾಜ್ಯ ಘಟಕವು ಹಳ್ಳಿಯಿಂದ ದಿಲ್ಲಿ ವರೆಗೆ ಪ್ರತಿಭಟನೆ ನಡೆಸುವುದಕ್ಕೆ ಚರ್ಚೆ ಪ್ರಾರಂಭಿಸಿದೆ. ಆದರೆ ಹೋರಾಟ ಇನ್ನೂ ತೀಕ್ಷ್ಣಗೊಳ್ಳದೆ ಇರುವುದು ಕಾರ್ಯಕರ್ತರಲ್ಲಿ ಬೇಸರ ಮೂಡಿಸಿದೆ.

Advertisement

ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಎಲ್ಲ ಜಿಲ್ಲಾಧ್ಯಕ್ಷರಿಗೂ ಸೂಚನೆ ಕಳುಹಿ ಸಿದ್ದು, ಶುಕ್ರವಾರ ಮೈಸೂರಿನಲ್ಲಿ ನಡೆಸಿದ
ಹೋರಾಟದ ಮಾದರಿಯಲ್ಲಿ ಸಿದ್ದರಾಮಯ್ಯ ಯಾವ ಜಿಲ್ಲೆಗೆ ಭೇಟಿ ನೀಡಿದರೂ “ಗೋ ಬ್ಯಾಕ್‌ ಸಿದ್ದರಾಮಯ್ಯ’ ಘೋಷಣೆ ಮೊಳಗಿಸುವಂತೆ ನಿರ್ದೇಶನ ನೀಡಿದ್ದಾರೆ.

ಪ್ರತಿಭಟನೆ ಹೇಗೆ?
ಸಿಎಂಗೆ ಹೋದಲ್ಲಿ, ಬಂದಲ್ಲಿ ಕಪ್ಪುಪಟ್ಟಿ ಪ್ರದರ್ಶಿಸುವುದು
ಗೋ ಬ್ಯಾಕ್‌ ಸಿದ್ದರಾಮಯ್ಯ’ ಘೋಷಣೆ ಮೊಳಗಿಸುವುದು
ಎಲ್ಲ ಜಿಲ್ಲೆಗಳಲ್ಲೂ ಇದೇ ಮಾದರಿ ಹೋರಾಟ ನಡೆಸುವುದು
ಅಧಿಕಾರದಿಂದ ಕೆಳಗಿಳಿಯುವವ ರೆಗೂ ರಾಜ್ಯಾದ್ಯಂತ ಪ್ರತಿಭಟನೆ
ದಿಲ್ಲಿಗೆ ತೆರಳಿ ಜಂತರ್‌ಮಂತರ್‌ನಲ್ಲೂ ಸಿಎಂ ರಾಜೀನಾಮೆಗೆ ಆಗ್ರಹ

Advertisement

Udayavani is now on Telegram. Click here to join our channel and stay updated with the latest news.

Next