Advertisement

ಬಿಜೆಪಿ ಬಣ ರಾಜಕಾರಣ

10:15 AM Feb 03, 2018 | Team Udayavani |

ಹರಪನಹಳ್ಳಿ: ಬಿಜೆಪಿ ರಾಜ್ಯಾದ್ಯಂತ ಆಯೋಜಿಸಿರುವ ಪರಿವರ್ತನಾ ಯಾತ್ರೆಯಸಮಾರಂಭದಲ್ಲಿ ಅಸಮಾಧಾನ ಸ್ಫೋಟಗೊಂಡಿದೆ. ದಾವಣಗೆರೆಯ ಹರಪನಹಳ್ಳಿಯಲ್ಲಿ ಶುಕ್ರವಾರ ನಡೆದ ಪರಿವರ್ತನಾ ಯಾತ್ರೆಯಲ್ಲಿ ಮಾಜಿ ಸಚಿವ ಜಿ. ಕರುಣಾಕರರೆಡ್ಡಿ ಹಾಗೂ ಮುಖಂಡ ಎನ್‌. ಕೊಟ್ರೇಶ್‌ ಬೆಂಬಲಿಗರ ನಡುವಿನ ಭಿನ್ನಮತ ವೇದಿಕೆ ಮೇಲೆಯೇ ಸ್ಫೋಟಗೊಂಡಿದ್ದು, ಖುದ್ದು ಯಡಿಯೂರಪ್ಪನವರೇ ಗದರಿ ಸಮಾಧಾನ ಪಡಿಸಿದರು. ಆರಂಭದಲ್ಲಿ ಬಿಜೆಪಿ ತಾಲೂಕು ಅಧ್ಯಕ್ಷ ಕೆ.ಲಕ್ಷ್ಮಣ್‌ ಸ್ವಾಗತಿಸುವಾಗ ಮೊದಲಿಗೆ ಕರುಣಾಕರರೆಡ್ಡಿ ಹೆಸರು ಹೇಳಿ ನಂತರ ಅವರ ಬಣದ ನಾಯಕರ ಹೆಸರು ಪ್ರಸ್ತಾಪಿಸಿದರು. ಕೊಟ್ರೇಶ್‌ ಹೆಸರು ಹೇಳದಿರುವುದರಿಂದ ಅವರ ಬೆಂಬಲಿಗರು ಲಕ್ಷ್ಮಣ್‌ ಸ್ವಾಗತ ಭಾಷಣಕ್ಕೆ ಆಕ್ಷೇಪ ವ್ಯಕ್ತಪಡಿಸಿದರು. 

Advertisement

ವಾತಾವರಣ ಗಮನಿಸಿದ ಯಡಿಯೂರಪ್ಪ ಅವರು ಮೈಕ್‌ ಕಸಿದುಕೊಂಡು “ಯಾರೂ ಯಾರ ಪರವಾಗಿಯೂ ಘೋಷಣೆ ಕೂಗಬೇಡಿ’ ಎಂದು ಕೈಮುಗಿದು ಮನವಿ ಮಾಡಿದರು. ನಂತರ ಯಡಿಯೂರಪ್ಪ ಮಾತನಾಡುವಾಗ ಎರಡೂ ಬಣದ ಬೆಂಬಲಿಗರು ವೇದಿಕೆ ಮೇಲಿದ್ದ ತಮ್ಮ ನಾಯಕರನ್ನು ಸನ್ಮಾನಿಸಲಾರಂಭಿಸಿದರು. ಸುಮ್ಮನಿರಲು ಬಿಎಸ್‌ವೈ ಸೂಚಿಸಿದರೂ ಸನ್ಮಾನ ಮುಂದುವರಿದಿತ್ತು. ತಾಳ್ಮೆ ಕಳೆದುಕೊಂಡ ಬಿಎಸ್‌ವೈ, “ನಾನು ಸಭೆ ಬಿಟ್ಟು ಎದ್ದು ಹೋಗುತ್ತೇನೆ ನೋಡಿ’ ಎಂದು ಗದರಿದಾಗ ಸುಮ್ಮನಾದರು. 

Advertisement

Udayavani is now on Telegram. Click here to join our channel and stay updated with the latest news.

Next