Advertisement

ದಡೇಸೂಗೂರು ಬಿಜೆಪಿ ಬಿಡಲ್ಲ: ಕೆ.ಎಸ್‌.ಈಶ್ವರಪ್ಪ

07:09 AM Jun 03, 2019 | Team Udayavani |

ಶಿವಮೊಗ್ಗ: “ಕನಕಗಿರಿ ಶಾಸಕ ಬಸವರಾಜ್‌ ದಡೇಸೂಗೂರು ಯಾವುದೇ ಕಾರಣಕ್ಕೂ ಬಿಜೆಪಿ ಬಿಡೋದಿಲ್ಲ. ಇದು ಕೇವಲ ಊಹಾಪೋಹವಷ್ಟೇ. ಈ ರೀತಿಯ ವದಂತಿಗಳ ಬಗ್ಗೆ ನಾನು ಮಾತನಾಡೊಲ್ಲ’ ಎಂದು ಬಿಜೆಪಿ ಶಾಸಕ ಈಶ್ವರಪ್ಪ ಹೇಳಿದರು.

Advertisement

ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಸವರಾಜ್‌ ದಡೇಸೂಗೂರು ಯಾವುದೇ ಕಾರಣಕ್ಕೂ ಬಿಜೆಪಿ ತ್ಯಜಿಸಲ್ಲ. ಇವೆಲ್ಲ ಕೇವಲ ವದಂತಿ. ಜನ ಇದನ್ನೆಲ್ಲ ನಂಬೊಲ್ಲ ಎಂದರು. ಮೈತ್ರಿಪಕ್ಷಗಳ ನಾಯಕರು ತಮ್ಮ ಪಕ್ಷಗಳ ಮುಖಂಡರ ಬಗ್ಗೆ ಹೇಳಿಕೆ ಕೊಡುವುದನ್ನು ಗಮನಿಸಿದರೆ ಸಾರ್ವಜನಿಕರಿಗೆ ರಾಜಕೀಯದ ಮೇಲೆ ಜಿಗುಪ್ಸೆ ಮೂಡುವಂತಾಗಿದೆ.

ಕಾಂಗ್ರೆಸ್‌ ಹಾಗೂ ಜೆಡಿಎಸ್‌ನ ಮುಖಂಡರು ಒಬ್ಬರ ಮೇಲೊಬ್ಬರು ಟೀಕೆ ಮಾಡುವುದು ಸಹಜ. ಆದರೆ, ಕಾಂಗ್ರೆಸ್‌ನವರು ಕಾಂಗ್ರೆಸ್‌ ಮುಖಂಡರ ಮೇಲೆ ಜೆಡಿಎಸ್‌ನವರು ಜೆಡಿಎಸ್‌ ಮುಖಂಡರ ಬಗ್ಗೆಯೇ ಟೀಕೆ ಮಾಡುತ್ತಿರೋದು ಇತ್ತೀಚಿನ ಬೆಳವಣಿಗೆಯಾಗಿದೆ.

ಇಂತಹ ಕೆಟ್ಟ ರಾಜಕಾರಣ ರಾಜ್ಯದಲ್ಲಿ ಎಂದೂ ಇರಲಿಲ್ಲ. ಜೆಡಿಎಸ್‌ನ ವಿಶ್ವನಾಥ್‌ ಅವರು ತಮ್ಮ ಪಕ್ಷದ ಮುಖಂಡರ ಬಗ್ಗೆ ಅಸಮಾಧಾನ ವ್ಯಕ್ತಪಡಿಸುತ್ತಿದ್ದು, ಅವರ ವಿರುದ್ಧ ದುರಂಹಕಾರಿ, ಜಾತಿವಾದಿ ಎಂಬೆಲ್ಲಾ ಪದ ಪ್ರಯೋಗ ಮಾಡುತ್ತಿದ್ದಾರೆ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next