Advertisement

BJPಗೆ ರಾಮ ಮಂದಿರದ ಪೇಟೆಂಟ್‌ ಇಲ್ಲ; ಎಲ್ಲರೂ ಒಗ್ಗೂಡಬೇಕು: ಉಮಾ

11:17 AM Nov 26, 2018 | udayavani editorial |

ಹೊಸದಿಲ್ಲಿ : ”ಭಾರತೀಯ ಜನತಾ ಪಕ್ಷಕ್ಕೆ ರಾಮ ಮಂದಿರದ ಮೇಲೇನೂ ಪೇಟೆಂಟ್‌ ಇಲ್ಲ; ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಎಲ್ಲ ಪಕ್ಷಗಳು ಒಗ್ಗೂಡಿ ಮುಂದೆ ಬರಬಹುದು” ಎಂದು ಹಿರಿಯ ಬಿಜೆಪಿ ನಾಯಕಿ, ಕೇಂದ್ರ ಸಚಿವ ಉಮಾ ಭಾರತಿ ಹೇಳಿದ್ದಾರೆ.

Advertisement

”ಭಗವಾನ್‌ ರಾಮ ಎಲ್ಲರಿಗೂ ಸೇರಿದ್ದಾನೆ. ಹಾಗಾಗಿ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಕ್ಕೆ ಎಲ್ಲ ಪಕ್ಷಗಳೂ ಕೈಜೋಡಿಸಬಹುದು. ಆದುದರಿಂದ ರಾಮ ಮಂದಿರ ನಿರ್ಮಾಣ ವಿಷಯದಲ್ಲಿ ಎಸ್‌ಪಿ, ಬಿಎಸ್‌ಪಿ, ಅಕಾಲಿ ದಳ, ಓವೈಸಿ, ಆಜಂ ಖಾನ್‌ ಮುಂತಾಗಿ ಎಲ್ಲರೂ ಮುಂದೆ ಬರಬೇಕು ಎಂದು ಸಚಿವೆ ಉಮಾ ಭಾರತಿ ನಿನ್ನೆ ಭಾನುವಾರ ಇಲ್ಲಿ ಹೇಳಿದರು. 

ರಾಮ ಮಂದಿರ ನಿರ್ಮಾಣವನ್ನು ಆಗ್ರಹಿಸಿ ಶಿವಸೇನೆಯ ಮುಖ್ಯಸ್ಥ ಉದ್ಧವ ಠಾಕ್ರೆ ಅಯೋಧ್ಯೆಗೆ ಭೇಟಿ ನೀಡಿರುವುದನ್ನು ಪ್ರಶಂಸಿಸಿದ ಉಮಾ ಭಾರತಿ, ‘ಮಂದಿರ ನಿರ್ಮಾಣ ವಿಷಯದಲ್ಲಿ ಉದ್ಧವ್‌ ಅವರ ಯೋಗದಾನವನ್ನು, ಪ್ರಯತ್ನವನ್ನು  ನಾನು ಮೆಚ್ಚುತ್ತೇನೆ’ ಎಂದು ಹೇಳಿದರು. 

‘ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣವಾಗದಿದ್ದರೆ ಕೇಂದ್ರದಲ್ಲಿನ ಬಿಜೆಪಿ ನೇತೃತ್ವದ ಎನ್‌ಡಿಎ ಸರಕಾರ ಬಹುಕಾಲ ಬಾಳದು’ ಎಂದು ಶಿವಸೇನೆಯ ಉದ್ಧವ ಠಾಕ್ರೆ ಹೇಳಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next