Advertisement

ಮಳೆಗಾಗಿ ದುಗ್ಗಮ್ಮಗೆ ಬಿಜೆಪಿ ಮೊರೆ

01:35 PM May 27, 2017 | |

ದಾವಣಗೆರೆ: ಬಿಜೆಪಿ ಕಾರ್ಯಕರ್ತರು ಶುಕ್ರವಾರ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಯಶಸ್ವಿ ಮೂರು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಸಂಭ್ರಮಿಸಿ, ಮಳೆಗಾಗಿ ಪ್ರಾರ್ಥಿಸಿ ಶುಕ್ರವಾರ ನಗರ ದೇವತೆ ಶ್ರೀ ದುರ್ಗಾಂಬಿಕಾ ದೇವಿಗೆ ವಿಶೇಷ ಪೂಜಾಭಿಷೇಕ ಸಲ್ಲಿಸಿದ್ದಾರೆ. 

Advertisement

ನರೇಂದ್ರ ಮೋದಿ ನೇತೃತ್ವದಲ್ಲಿ ಅಧಿಕಾರಕ್ಕೆ ಬಂದಿರುವ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರ ಮೂರು ವರ್ಷಗಳಿಂದ ಉತ್ತಮ ಅಧಿಕಾರ ನಡೆಸುತ್ತಿದೆ. ಹಲವಾರು ಯೋಜನೆ, ಕಾರ್ಯಕ್ರಮ ಜಾರಿಗೆ ತರುವ ಮೂಲಕ ದೇಶದ್ಯಾಂತ ಸಂಚಲನ ಮೂಡಿಸಿದೆ.

ಇನ್ನು ಎರಡು ವರ್ಷದ ಅವಧಿಯಲ್ಲಿ ಉತ್ತಮ ಅಧಿಕಾರ ನಡೆಸುವ ಮೂಲಕ ದೇಶದ ಅಭಿವೃದ್ಧಿಪಡಿಸಲಿ ಎಂದು ಕಾರ್ಯಕರ್ತರು ಆಶಿಸಿದರು. ದಾವಣಗೆರೆ ಒಳಗೊಂಡಂತೆ ರಾಜ್ಯದ ವಿವಿಧ ಭಾಗದಲ್ಲಿ ಮಳೆಯ ಕೊರತೆ ಕಂಡು ಬರುತ್ತಿದೆ.

ಎಲ್ಲಾ ಕಡೆ ಉತ್ತಮ ಮಳೆ, ಬೆಳೆಯಾಗಲಿ. ಕರ್ನಾಟಕದಲ್ಲಿ ಸಮೃದ್ಧಿ ನೆಲಸಲಿ ಎಂದು ಪ್ರಾರ್ಥಿಸಿದರು. ಜಿಲ್ಲಾ ಅಧ್ಯಕ್ಷ ಯಶವಂತರಾವ್‌ ಜಾಧವ್‌, ಜಿಲ್ಲಾ ಪಂಚಾಯತ್‌ ಅಧ್ಯಕ್ಷೆ ಉಮಾ ರಮೇಶ್‌, ಮುಖಂಡರಾದ ಅಣಬೇರು ಜೀವನಮೂರ್ತಿ, ಎಲ್‌. ಬಸವರಾಜ್‌,

-ಕೊಂಡಜ್ಜಿ ಜಯಪ್ರಕಾಶ್‌, ಎಚ್‌.ಎನ್‌. ಶಿವಕುಮಾರ್‌, ಕೆ.ಎನ್‌. ಓಂಕಾರಪ್ಪ, ಪ್ರೊ| ಲಿಂಗಣ್ಣ, ಸಹನಾ ರವಿ, ಪಿ.ಸಿ. ಶ್ರೀನಿವಾಸ್‌, ಸಂಕೋಳ್‌ ಚಂದ್ರಶೇಖರ್‌, ರಾಜನಹಳ್ಳಿ ಶಿವಕುಮಾರ್‌, ಸೋಗಿ ಶಾಂತಕುಮಾರ್‌, ಶಿವನಗೌಡ ಪಾಟೀಲ್‌, ಎಚ್‌.ಕೆ. ಬಸವರಾಜ್‌ ಇತರರು ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next