Advertisement

ಬಿಜೆಪಿ ಬಿಕ್ಕಟ್ಟು: ಬಿಎಸ್‌ವೈ-ಈಶ್ವರಪ್ಪಗೆ RSS ಬೈಠಕ್‌ಗೆ ಆಹ್ವಾನ 

12:03 PM Jan 14, 2017 | |

ಬೆಂಗಳೂರು: ಸಂಗೊಳ್ಳಿ ರಾಯಣ್ಣ ಬ್ರಿಗೇಡ್‌ ಕುರಿತಂತೆ ರಾಜ್ಯ ಬಿಜೆಪಿಯಲ್ಲಿ ಉದ್ಭವಿಸಿರುವ ಬಿಕ್ಕಟ್ಟು ಶಮನಗೊಳಿಸಲು ಸಂಘ ಪರಿವಾರ ಮುಂದಾಗಿದ್ದು, ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ  ಮತ್ತು ವಿಪಕ್ಷ ನಾಯಕ ಕೆ.ಎಸ್‌.ಈಶ್ವರಪ್ಪ ಅವರನ್ನು ಶನಿವಾರ ಬೈಠಕ್‌ಗೆ ಕರೆದಿರುವ ಬಗ್ಗೆ ವರದಿಯಾಗಿದೆ. 

Advertisement

ಚಾಮರಾಜ ಪೇಟೆಯಲ್ಲಿರುವ ಆರ್‌ಎಸ್‌ಎಸ್‌ ಕಚೇರಿಗೆ ಇಬ್ಬರನ್ನು ಬೈಠಕ್‌ಗೆ ಕರೆಯಲಾಗಿದೆ. ಸಂಘ ಪರಿವಾರದ ಬಲವಾದ ಹಿನ್ನಲೆಯುಳ್ಳ ಇಬ್ಬರೂ ಬೈಠಕ್‌ನಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ವರದಿಯಾಗಿದೆ. 

ಪಕ್ಷದ ಭಿನ್ನಮತದ ತೀವ್ರಗೊಂಡಿದ್ದು, ಯಡಿಯೂರಪ್ಪ ಅವರ ಒಟ್ಟಾರೆ ಕಾರ್ಯವೈಖರಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ ಹಲವು ಹಾಲಿ ಮತ್ತು ಮಾಜಿ ಶಾಸಕರನ್ನು ಒಳಗೊಂಡಂತೆ 24 ಮಂದಿ ಮುಖಂಡರು ಯಡಿಯೂರಪ್ಪ
ಅವರಿಗೇ ತೀಕ್ಷ್ಣವಾಗಿ ಪತ್ರ ಬರೆದ ಬಳಿಕ ಬೈಠಕ್‌ ಕರೆಯಲಾಗಿದೆ. 

Advertisement

Udayavani is now on Telegram. Click here to join our channel and stay updated with the latest news.

Next