Advertisement

ಪಾಕ್‌ ಪತ್ರಕರ್ತನ ಹೇಳಿಕೆಗೆ ಕಾಂಗ್ರೆಸ್‌ ಮೌನವೇಕೆ? ಬಿಜೆಪಿ ವಕ್ತಾರ ಗೌರವ್‌ ಭಾಟಿಯಾ

12:20 AM Jul 14, 2022 | Team Udayavani |

ನವದೆಹಲಿ: ಬೆಂಗಳೂರು ಸೇರಿದಂತೆ ಪ್ರಮುಖ ನಗರಗಳಲ್ಲಿ ಗೂಢಚರ್ಯೆ ನಡೆಸಿದ್ದೆ ಎಂಬ ಪಾಕಿಸ್ತಾನ ಪತ್ರಕರ್ತ ನುಸ್ರುತ್‌ ಮಿರ್ಜಾ ಆರೋಪಕ್ಕೆ ಸ್ಪಷ್ಟನೆ ನೀಡುವಂತೆ ಬಿಜೆಪಿ ಕಾಂಗ್ರೆಸ್‌ಗೆ ಒತ್ತಾಯಿಸಿದೆ. ಇದರ ಜತೆಗೆ ಮಾಜಿ ಉಪರಾಷ್ಟ್ರಪತಿ ಹಮೀದ್‌ ಅನ್ಸಾರಿ ಜತೆಗೆ ಭೇಟಿಯಾಗಿದ್ದೆ ಎಂಬುದರ ಬಗ್ಗೆ ಸ್ಪಷ್ಟ ನಿಲುವು ವ್ಯಕ್ತಪಡಿಸಬೇಕು ಎಂದು ಬಿಜೆಪಿ ವಕ್ತಾರ ಗೌರವ್‌ ಭಾಟಿಯಾ ಒತ್ತಾಯಿಸಿದ್ದಾರೆ.

Advertisement

ಕಾಂಗ್ರೆಸ್‌ ಮುಖಂಡರಾದ ಸೋನಿಯಾ ಗಾಂಧಿ ಮತ್ತು ರಾಹುಲ್‌ ಗಾಂಧಿ ಈ ನಿಟ್ಟಿನಲ್ಲಿ ಏಕೆ ಮೌನವಾಗಿದ್ದಾರೆ ಎಂದು ಅವರು ಪ್ರಶ್ನಿಸಿದ್ದಾರೆ. “ದೇಶದ ಜನರು ನಿಮಗೆ ಗೌರವ ನೀಡುತ್ತಿದ್ದರೂ, ಏಕೆ ಮೋಸ ಮಾಡಿದಿರಿ’ ಎಂದು ಭಾಟಿಯಾ ಅನ್ಸಾರಿ ಅವರಿಗೆ ಪ್ರಶ್ನೆ ಮಾಡಿದ್ದಾರೆ.

ಅವರನ್ನು ಭೇಟಿಯಾಗಿಲ್ಲ: ಪಾಕಿಸ್ತಾನದ ಪತ್ರಕರ್ತ ನುಸ್ರುತ್‌ ಮಿರ್ಜಾ ಅವರನ್ನು ಭೇಟಿಯೇ ಆಗಿಲ್ಲ ಎಂದು ಮಾಜಿ ಉಪರಾಷ್ಟ್ರಪತಿ ಹಮೀದ್‌ ಅನ್ಸಾರಿ ತಿಳಿಸಿದ್ದಾರೆ.

ಜತೆಗೆ ತಮ್ಮ ಮೇಲಿರುವ ಆರೋಪಗಳನ್ನು ತಿರಸ್ಕರಿಸಿದ್ದಾರೆ. ಪಾಕ್‌ ಪತ್ರಕರ್ತ ಮಿರ್ಜಾ ಆಯೋಜಿಸಲಾಗಿದ್ದ ಕಾರ್ಯಕ್ರಮಕ್ಕೆ ತೆರಳಲಿಲ್ಲ ಮತ್ತು ಆಹ್ವಾನವೇನಿದ್ದರೂ ವಿದೇಶಾಂಗ ಸಚಿವಾಲಯದ ಮೂಲವೇ ಬರುತ್ತದೆ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next