Advertisement

Maharashtra: ರೈತರ ಅತಿದೊಡ್ಡ ಶತ್ರು ಬಿಜೆಪಿ, ಮಹಾ ಪರಿವರ್ತನೆ ಬೇಕಿದೆ: ಖರ್ಗೆ

10:38 PM Oct 21, 2024 | Team Udayavani |

ಮುಂಬೈ: “ಮಹಾರಾಷ್ಟ್ರದ ರೈತರ ಅತಿದೊಡ್ಡ ಶತ್ರುಗಳೆಂದರೆ ಅದು ಬಿಜೆಪಿ! ಈ ಡಬ್ಬಲ್‌ ಇಂಜಿನ್‌ ಸರ್ಕಾರವನ್ನು ಅಧಿಕಾರದಿಂದ ಕೆಳಗಿಳಿಸಿದರಷ್ಟೇ ರೈತರ ಕಲ್ಯಾಣ ಸಾಧ್ಯ ಎಂದು ರಾಜ್ಯದ ಜನರು ನಿರ್ಧರಿಸಿದ್ದಾರೆ.

Advertisement

ಮಹಾರಾಷ್ಟ್ರ ಮಹಾ ಪರಿವರ್ತನೆಯನ್ನು ಬಯಸುತ್ತಿದೆ” ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಟ್ವೀಟ್‌ ಮಾಡಿದ್ದಾರೆ.

ಮಹಾರಾಷ್ಟ್ರದ ಬರ ನೀಗಿಸುತ್ತೇವೆ. 20000 ಕೋಟಿ ರೂ. ನೀರಾವರಿ ಜಾಲ ಸೃಷ್ಟಿಸುತ್ತೇವೆ ಎಂದು ಬಿಜೆಪಿ ಸುಳ್ಳು ಭರವಸೆಗಳನ್ನು ನೀಡಿದೆ. ರಾಜ್ಯದಲ್ಲಿ 20 ಸಾವಿರ ರೈತರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಬಿಜೆಪಿಯು ರೈತರ ಅತಿದೊಡ್ಡ ಶತ್ರುವಾಗಿದೆ ಎಂದಿದ್ದಾರೆ.

ಈರುಳ್ಳಿ ರಫ್ತು ನಿಷೇಧ ಮೂಲಕ ರೈತರಿಗೆ ಬಿಜೆಪಿ ಕಷ್ಟ ನೀಡುತ್ತಿದೆ ಎಂದು ಟೀಕಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next