Advertisement

ಬಿಜೆಪಿಯವರು ಗಾಡ್‌ ಕೆ ಲವರ್ಸ್‌ ಅಲ್ಲ,ಗೋಡ್ಸೆ ಲವರ್ಸ್‌: ರಾಹುಲ್‌

09:43 AM May 18, 2019 | Team Udayavani |

ಹೊಸದಿಲ್ಲಿ : ಬಿಜೆಪಿ ಮತ್ತು ಆರ್‌ಎಸ್‌ಎಸ್‌ನವರು ಗೋಡ್ಸೆ ಪ್ರೀತಿಸುವವರು ಎಂದು ಎಐಸಿಸಿ ಅಧ್ಯಕ್ಷ  ರಾಹುಲ್‌ ಗಾಂಧಿ ಅವರು ಶುಕ್ರವಾರ ಟ್ವೀಟ್‌ ಮಾಡಿದ್ದಾರೆ.

Advertisement

ಕೊನೆಗೂ ಗೊತ್ತಾಯಿತು, ಬಿಜೆಪಿ ಮತ್ತು ಆರ್‌ಎಸ್‌ಎಸ್‌ನವರು ಗಾಡ್‌ ಕೆ ಲವರ್ಸ್‌ ಅಲ್ಲ, ಗೋಡ್ಸೆ ಲವರ್ಸ್‌ ಎಂದು ಬರೆದಿದ್ದಾರೆ.

ನಾಥುರಾಮ್‌ ಗೋಡ್ಸೆ ಪರ ಸಹಾನುಭೂತಿ ತೋರಿ ಬಿಜೆಪಿಯ ನಾಯಕರಾದ ಸಾಧ್ವಿ ಪ್ರಜ್ಞಾಸಿಂಗ್‌ , ಸಚಿವ ಅನಂತ್‌ ಕುಮಾರ್‌ ಹೆಗಡ, ಸಂಸದ ನಳೀನ್‌ ಕುಮಾರ ಕಟೀಲ್‌ ಅವರುಗಳು ನೀಡಿದ ಹೇಳಿಕೆಗಳು ಮತ್ತು ಟ್ವೀಟ್‌ಗಳು ಭಾರೀ ವಿವಾದಕ್ಕೆ ಗುರಿಯಾದ ಬೆನ್ನಲ್ಲೇ ರಾಹುಲ್‌ ಈ ಟ್ವೀಟ್‌ ಮಾಡಿದ್ದಾರೆ.

ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್‌ ಶಾ ಅವರು ಪಕ್ಷದ ನಾಯಕರು ಗಳು ನೀಡಿರುವ ಹೇಳಿಕೆಗಳು ವೈಯಕ್ತಿಕ.ಇದು ಪಕ್ಷದ ನಿಲುವಲ್ಲ ಎಂದು ಈಗಾಗಲೇ ಟ್ವೀಟ್‌ ಮಾಡಿದ್ದಾರೆ.

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next