Advertisement

ಬಿಸ್ಮಿಲ್ಲಾ ಖಾನ್‌ರ ಪದ್ಮ ವಿಭೂಷಣ ಪ್ರಶಸ್ತಿಗೆ ಗೆದ್ದಲು

08:35 AM Aug 23, 2017 | Team Udayavani |

ವಾರಾಣಸಿ: ಶಹನಾಯ್‌ ಮಾಂತ್ರಿಕ ಬಿಸ್ಮಿಲ್ಲಾ ಖಾನ್‌ ನಿಧನರಾಗಿ ಸೋಮವಾರಕ್ಕೆ 11 ವರ್ಷಗಳು ಕಳೆದಿವೆ. ಅವರಿಗೆ ಕೊಡಮಾಡಲಾಗಿದ್ದ ಪದ್ಮವಿಭೂಷಣ ಪ್ರಶಸ್ತಿ ಪತ್ರದ ಒಂದು ಭಾಗವನ್ನು ಗೆದ್ದಲು ತಿಂದಿದೆ. ಅವರ 11ನೇ ಪುಣ್ಯತಿಥಿ ಅಂಗವಾಗಿ ಅವರ ಮಗ ಅವರು ಬಳಸಿದ ವಾದ್ಯಗಳು ಮತ್ತು ಅವರಿಗೆ ಸಂದ ಪ್ರಶಸ್ತಿ ಪುರಸ್ಕಾರಗಳ ಪ್ರದರ್ಶನ ಏರ್ಪಡಿಸಿದ್ದರು. ಈ ವೇಳೆ 1980ರಲ್ಲಿ ನೀಡಲಾಗಿದ್ದ ಪದ್ಮ ಪ್ರಶಸ್ತಿಯನ್ನು ಗೆದ್ದಲು ತಿಂದಿರುವುದು ಅವರ ಮಗನ ಗಮನಕ್ಕೆ ಬಂದಿದೆ. ನಮ್ಮ ಆರ್ಥಿಕ ಪರಿಸ್ಥಿತಿ ಉತ್ತಮವಾಗಿಲ್ಲ. ಪ್ರಶಸ್ತಿ ಮತ್ತು ವಾದ್ಯಗಳನ್ನು ಸಂರಕ್ಷಿಸಲು ಬಹಳ ಕಷ್ಟವಾಗುತ್ತಿದೆ. ನಮ್ಮ ಕೈಲಾದಷ್ಟು ಹಣ ವಿನಿಯೋಗಿಸಿ ಈ ವಸ್ತುಗಳನ್ನು ಸಂರಕ್ಷಿಸುವ ಕೆಲಸ ಮಾಡುತ್ತಿದ್ದೇವೆ ಎಂದು ಅವರು ಹೇಳಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next