Advertisement

ಪ್ರಾಣಿಗಳಿಗೆ ಎಸೆದಂತೆ ನಿರಾಶ್ರಿತರಿಗೆ ಬಿಸ್ಕೆಟ್ ಎಸೆದ ಸಚಿವ ರೇವಣ್ಣ!

10:57 AM Aug 20, 2018 | Sharanya Alva |

ಹಾಸನ: ನಿರಾಶ್ರಿತ ಕೇಂದ್ರಕ್ಕೆ ಭೇಟಿ ನೀಡಿದ್ದ ಸಚಿವ ಎಚ್.ಡಿ.ರೇವಣ್ಣ ಅವರು ಪ್ರಾಣಿಗಳಿಗೆ ಎಸೆದಂತೆ ನಿರಾಶ್ರಿತರಿಗೆ ಬಿಸ್ಕೆಟ್ ಎಸೆದಿರುವುದು ಭಾರೀ ಆಕ್ರೋಶ ಹಾಗೂ ಟೀಕೆಗೆ ಕಾರಣವಾಗಿದೆ.

Advertisement

ಹಾಸನದ ರಾಮನಾಥಪುರದ ನಿರಾಶ್ರಿತರ ಕೇಂದ್ರಕ್ಕೆ ಪಿಡಬ್ಲ್ಯುಡಿ ಹಾಗೂ ಹಾಸನ ಜಿಲ್ಲಾ ಉಸ್ತುವಾರಿ ಸಚಿವ ಎಚ್ ಡಿ ರೇವಣ್ಣ ಶನಿವಾರ ಶಾಸಕ ಎಟಿ ರಾಮಸ್ವಾಮಿ ಅವರ ಜೊತೆ ಭೇಟಿ ನೀಡಿದ್ದರು. ಈ ಸಂದರ್ಭದಲ್ಲಿ  ನಿರಾಶ್ರಿತರ ಸಮಸ್ಯೆ ಕೇಳುವ ಮೊದಲೇ ಬಿಸ್ಕೆಟ್ ಅನ್ನು ಪ್ರಾಣಿಗಳಿಗೆ ಎಸೆಯುವಂತೆ ಎಸೆದಿದ್ದರು.

ಸಚಿವ ರೇವಣ್ಣ ಅವರು ತಮ್ಮ ಕಷ್ಟಗಳನ್ನು ಆಲಿಸಲು ಬಂದಿದ್ದರು ಎಂದು ಅವರೆಲ್ಲಾ ಗುಂಪಾಗಿ ಮುತ್ತಿಕೊಂಡಿದ್ದರು. ಆದರೆ ಈ ಸಂದರ್ಭದಲ್ಲಿ ತಾವು ತಂದಿದ್ದ ಒಂದು ಬಾಕ್ಸ್ ಬಿಸ್ಕೆಟ್ ನಲ್ಲಿ ಒಂದೊಂದಾಗಿ ಎಸೆದಿದ್ದರು. ಇದು ಖಾಸಗಿ ಟಿವಿ ಚಾನೆಲ್ ಗಳಲ್ಲಿ ಪ್ರಸಾರವಾಗಿದ್ದು, ಈ ಬಗ್ಗೆ ಟೀಕೆ ವ್ಯಕ್ತವಾಗತೊಡಗಿದೆ.

Advertisement

Udayavani is now on Telegram. Click here to join our channel and stay updated with the latest news.

Next