Advertisement

ಬಿಲ್ಲವಾಸ್‌ ಕತಾರ್‌ನ ನೂತನ ನಿರ್ವಹಣ ಸಮಿತಿಯ ಪದಗ್ರಹಣ

02:06 PM Feb 24, 2024 | Team Udayavani |

ಕತಾರ್‌ : ಬಿಲ್ಲವಾಸ್‌ ಕತಾರ್‌ನ ವಾರ್ಷಿಕ ಸಭೆ ಇತ್ತೀಚೆಗೆ ಜರಗಿತು. ಈ ವೇಳೆ 2024-25ನೇ ಸಾಲಿನ ಹೊಸ ನಿರ್ವಹಣ ಸಮಿತಿಯನ್ನು ಆಯ್ಕೆ ಮಾಡಲಾಯಿತು.

Advertisement

ನೂತನ ಅಧ್ಯಕ್ಷರಾಗಿ ಸಂದೀಪ್‌ ಮಲ್ಲಾರ್‌ ಸರ್ವಾನುಮತದಿಂದ ಆಯ್ಕೆಯಾದರು. ಉಪಾಧ್ಯಕ್ಷರಾಗಿ ಅಪರ್ಣಾ ಶರತ್‌, ಪ್ರಧಾನ ಕಾರ್ಯದರ್ಶಿಯಾಗಿ ಮಹೇಶ್‌ ಕುಮಾರ್‌, ಜಂಟಿ ಪ್ರಧಾನ ಕಾರ್ಯದರ್ಶಿಯಾಗಿ ಸಂದೀಪ್‌ ಕೋಟ್ಯಾನ್‌, ಕೋಶಾಧಿಕಾರಿಯಾಗಿ ಅಜಯ್‌ ಕೋಟ್ಯಾನ್‌, ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಪೂಜಾ ಜಿತಿನ್‌, ಜಂಟಿ ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಶ್ವೇತಾ ಸುವರ್ಣ, ಸದಸ್ಯತ್ವ ಸಂಯೋಜಕರಾಗಿ ಚಂಚಲಾಕ್ಷಿ ಪೂಜಾರಿ, ಕ್ರೀಡಾ ಕಾರ್ಯದರ್ಶಿಯಾಗಿ ಸೀಮಾ ಉಮೇಶ್‌ ಪೂಜಾರಿ, ಮಾಧ್ಯಮ ಸಂಯೋಜಕರಾಗಿ ನಿತಿನ್‌ ಸನಿಲ್‌ , ಸರಬರಾಜು (ಲಾಜಿಸ್ಟಿಕ್ಸ್‌) ಸಂಯೋಜಕರಾಗಿ ನಿತಿನ್‌ ಕುಂಪಲ ಆಯ್ಕೆಯಾದರು.

ಪೂರ್ವಾಧ್ಯಕ್ಷರಾದ ರಘುನಾಥ್‌ ಅಂಚನ್‌ ಅವರು ಸಂಸ್ಥೆಯ ಬೆಳವಣಿಗೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ನೂತನ ಸಮಿತಿಗೆ ಶುಭ ಹಾರೈಸಿದರು. ಹಿಂದಿನ ಸಮಿತಿಯ ಸದಸ್ಯರು ಮತ್ತು ಬಿಲ್ಲವಾಸ್‌ ಕತಾರ್‌ನ ಸದಸ್ಯರು ಸಭೆಯಲ್ಲಿ ಭಾಗವಹಿಸಿದ್ದರು.

ಬಿಲ್ಲವಾಸ್‌ ಕತಾರ್‌ ಕ್ರಿಯಾಶೀಲ ಸಂಸ್ಥೆಯಾಗಿದ್ದು, ಭಾರತೀಯ ರಾಯಭಾರ ಕಚೇರಿಯ ಆಶ್ರಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಭಾರತೀಯ ಸಾಂಸ್ಕೃತಿಕ ಕೇಂದ್ರ – ಕತಾರ್‌ (ಐ ಸಿ ಸಿ -ಕತಾರ್‌ )ನ ಸಹವರ್ತಿ ಸಂಸ್ಥೆಗಳಲ್ಲಿ ಅಗ್ರಗಣ್ಯವಾಗಿದೆ. ಬಿಲ್ಲವಾಸ್‌ ಕತಾರ್‌ ಸಾಮಾಜಿಕ, ಸಾಂಸ್ಕೃತಿಕ ಮತ್ತು ಕ್ರೀಡೆಗಳಿಗೆ ಉತ್ತೇಜನವನ್ನು ಕೊಡುವುದಕ್ಕೆ ಸಮರ್ಪಕವಾದ ವೇದಿಕೆಯನ್ನು ನಿರ್ಮಾಣ ಮಾಡಿಕೊಟ್ಟಿದೆ.

Advertisement

Udayavani is now on Telegram. Click here to join our channel and stay updated with the latest news.

Next