Advertisement

ಬಿಲ್ಲವರ ಅಸೋಸಿಯೇಶನ್‌ ಡೊಂಬಿವಲಿ :ಶ್ರೀ ಶನೀಶ್ವರ ಗ್ರಂಥ ಪಾರಾಯಣ

03:19 PM Feb 23, 2019 | Team Udayavani |

ಡೊಂಬಿವಲಿ: ಬಿಲ್ಲವರ ಅಸೋಸಿಯೇಶನ್‌ ಮುಂಬಯಿ ಇದರ ಡೊಂಬಿವಲಿ ಸ್ಥಳೀಯ ಸಮಿತಿಯ ಕಚೇರಿಯಲ್ಲಿ ಫೆ. 9 ರಂದು ಅಪರಾಹ್ನ 1 ರಿಂದ ರಾತ್ರಿ 8 ರ ತನಕ ಸಾಮೂಹಿಕ ಶ್ರೀ ಶನೀಶ್ವರ ಗ್ರಂಥಪಾರಾಯಣವು ಶ್ರೀ ರಾಧಾಕೃಷ್ಣ ಭಜನಾ ಮಂಡಳಿ ಡೊಂಬಿವಲಿ ಇದರ ಕಲಾವಿದರ ಸಹಕಾರದಿಂದ ಅದ್ದೂರಿಯಾಗಿ ನಡೆಯಿತು.

Advertisement

ಸ್ಥಳೀಯ ಕಚೇರಿಯ ಸಮಿತಿ ಸದಸ್ಯ ಮಂಜಪ್ಪ ಪೂಜಾರಿ ಹಾಗೂ ವೇದಾವತಿ ಮಂಜಪ್ಪ ಪೂಜಾರಿ ದಂಪತಿ ಅವರು ಪೂಜೆಯಲ್ಲಿ ಭಾಗವಹಿಸಿದರು. ಧಾರ್ಮಿಕ ಕಾರ್ಯಕ್ರಮವಾಗಿ ಪ್ರಕಾಶ್‌ ಭಟ್‌ ಕಾನಾಂಗಿ ಅವರು ಕಲಶ ಪ್ರತಿಸ್ಥಾಪನೆಗೈದು ವಿವಿಧ ಪೂಜಾ ವಿಧಿ-ವಿಧಾನಗಳನ್ನು ನೆರವೇರಿಸಿದರು. ಐತಪ್ಪ ಸುವರ್ಣ, ವಿ. ಎನ್‌. ಆಮೀನ್‌, ಧರ್ಮರಾಜ ಪೂಜಾರಿ ಮತ್ತು  ಇ. ಓ. ಪೂಜಾರಿ ಅವರು ಸಹಕರಿಸಿದರು.

ಅನ್ನಸಂತರ್ಪಣೆಯನ್ನು ಉದ್ಯಮಿ ರವಿ ಎಸ್‌. ಪೂಜಾರಿ ದಂಪತಿ, ಆರ್‌. ಬಿ. ಶೆಟ್ಟಿ ದಂಪತಿ, ಬಿಲ್ಲವ ಛೇಂಬರ್‌ ಆಫ್‌ ಕಾಮರ್ಸ್‌ ಆ್ಯಂಡ್‌ ಇಂಡಸ್ಟಿÅà ಇದರ ಕಾರ್ಯಾಧ್ಯಕ್ಷ  ಎನ್‌. ಟಿ. ಪೂಜಾರಿ, ಉಪ ಕಾರ್ಯಾಧ್ಯಕ್ಷ ಮಹೇಂದ್ರ ಎಸ್‌. ಕರ್ಕೇರ, ಭಾರತ್‌ ಬ್ಯಾಂಕ್‌ನ ನಿರ್ದೇಶಕ  ಪುರುಷೋತ್ತಮ ಎಸ್‌. ಕೋಟ್ಯಾನ್‌, ಬಿಲ್ಲವ ಛೇಂಬರ್‌ ಆಫ್‌ ಕಾಮರ್ಸ್‌ ಆ್ಯಂಡ್‌ ಇಂಡಸ್ಟಿÅ ಇದರ ನಿರ್ದೇಶಕ ಗಂಗಾಧರ ಎನ್‌. ಆಮೀನ್‌, ಹರೀಶ್‌ ಡಿ. ಶೆಟ್ಟಿ ದಂಪತಿಗಳು,  ಗಿರಿಜಾ ಓ. ಅಂಚನ್‌ ಮತ್ತು ಪರಿವಾರ, ಗುಲಾಬಿ ಬಾಬು ಪೂಜಾರಿ, ಗಿರಿಜಾ ಸಂಜೀವ ಪಾಲನ್‌ ಮತ್ತು ಪರಿವಾರ, ಕುಶಾ ರವಿ ಸನಿಲ…,  ಅನಿತಾ ಸುಮಿತ್‌ ಸುವರ್ಣ, ದಿನೇಶ್‌ ಕರ್ಕೇರ, ರಾಜೇಶ್‌ ಕೋಟ್ಯಾನ್‌ ಹಾಗೂ ಕೆ. ಓ. ಕೋಟ್ಯಾನ್‌ ಮತ್ತು ಪರಿವಾರ ಇವರ ವತಿಯಿಂದ ಆಯೋಜಿಸಲಾಗಿತ್ತು.

ಬಿಲ್ಲವರ ಅಸೋಸಿಯೇಶನ್‌ ಮುಂಬಯಿ ಅಧ್ಯಕ್ಷ ಚಂದ್ರಶೇಖರ ಪೂಜಾರಿ  ಮತ್ತು ಕಾರ್ಯಕಾರಿ ಸಮಿತಿಯ ಸದಸ್ಯರು, ಭಾರತ್‌ ಬ್ಯಾಂಕಿನ ಕಾರ್ಯಾಧ್ಯಕ್ಷ ಜಯ ಸಿ. ಸುವರ್ಣ, ಉದ್ಯಮಿಗಳಾದ ರಾಮಚಂದ್ರ ಬಂಗೇರ, ಸತೀಶ್‌ ಕೋಟ್ಯಾನ್‌ ದಂಪತಿಗಳು, ವಿಮಲಾ ಕೆ. ಅಂಚನ್‌, ಹೇಮಾ ದೇವರಾಜ್‌ ಪೂಜಾರಿ, ನಿತ್ಯಾನಂದ ಜತ್ತನ್‌ ದಂಪತಿಗಳು, ವಿವಿಧ ಪೂಜಾ ಸೇವೆಗಳನ್ನಿತ್ತು ಸಹಕರಿಸಿದರು.

ಬಿಲ್ಲವರ ಅಸೋಸಿಯೇಶನ್‌ ಮುಂಬಯಿ ಇದರ ವಿವಿಧ ಸ್ಥಳೀಯ ಕಚೇರಿಗಳ ಪದಾಧಿಕಾರಿಗಳು, ಭಾರತ್‌ ಕೋ. ಆಪರೇಟಿವ್‌ ಬ್ಯಾಂಕ್‌ನ ಮ್ಯಾನೇಜರ್‌, ಸಿಬ್ಬಂದಿಗಳು, ಡೊಂಬಿವಲಿ, ಕಲ್ಯಾಣ್‌, ಪರಿಸರದ ತುಳು-ಕನ್ನಡಪರ ಸಂಘ-ಸಂಸ್ಥೆಗಳ ಪ್ರತಿನಿಧಿಗಳು ಹಾಗೂ ಸಾವಿರಾರು ಭಕ್ತರು ಈ ಪೂಜೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.

Advertisement

ಸಿ. ಟಿ. ಸಾಲ್ಯಾನ್‌ ಅವರ ಮೇಲ್ವಿಚಾರಣೆಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಡೊಂಬಿವಲಿ ಸ್ಥಳೀಯ ಸಮಿತಿಯ ಗೌರವ ಕಾರ್ಯಾಧ್ಯಕ್ಷ ಸಿ. ಎನ್‌. ಕರ್ಕೇರ,  ಕಾರ್ಯಾಧ್ಯಕ್ಷ ದೇವರಾಜ್‌ ಪೂಜಾರಿ,  ಮಾಜಿ ಕಾರ್ಯಾಧ್ಯಕ್ಷ ರವಿ ಎಸ್‌. ಸನಿಲ್‌, ಉಪ ಕಾರ್ಯಾಧ್ಯಕ್ಷ ಚಂದ್ರಹಾಸ್‌ ಎಸ್‌.  ಪಾಲನ್‌ ಹಾಗೂ ಶ್ರೀಧರ್‌ ಅಮೀನ್‌, ಗೌರವ  ಕಾರ್ಯದರ್ಶಿ ಪುರಂದರ ಪೂಜಾರಿ, ಜತೆ ಕಾರ್ಯದರ್ಶಿ ವಿಠuಲ್‌ ಅಮೀನ್‌, ಕೋಶಾಧಿಕಾರಿ ಸುನೀಲ್‌ ಸಾಲ್ಯಾನ್‌, ಮಂಜಪ್ಪ ಪೂಜಾರಿ, ಜಗನ್ನಾಥ ಸನೀಲ್‌, ಎಂ. ಎನ್‌.  ಕೋಟ್ಯಾನ್‌, ಸೋಮನಾಥ್‌ ಪೂಜಾರಿ, ಸಮಿತಿಯ ಸದಸ್ಯರು, ಸ್ಥಳೀಯ ಸದಸ್ಯರು, ಮಹಿಳಾ ವಿಭಾಗದ ಸದಸ್ಯೆಯರು ಹಾಗೂ ಯುವಾಭ್ಯುದಯ ಉಪಸಮಿತಿಯ ಸದಸ್ಯರು  ಸಾಮೂಹಿಕ ಶ್ರೀ ಶನೀಶ್ವರ ಗ್ರಂಥಪಾರಾಯಣ ಕಾರ್ಯಕ್ರಮ ಯಶಸ್ವಿಯಾಗಲು ಸಹಕರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next