Advertisement

ಮೈ-ಬೆಂ ದಶಪಥ ಹೆದ್ದಾರಿಯಲ್ಲಿ ಬೈಕ್ ವ್ಹೀಲಿಂಗ್: ಪ್ರಕರಣ ದಾಖಲು

11:51 AM Jul 20, 2023 | Team Udayavani |

ರಾಮನಗರ: ಕಳೆದೆರಡು ತಿಂಗಳಿನಿಂದ ಅಪಘಾತಗಳ ಕಾರಣದಿಂದಲೇ ಸುದ್ದಿಯಲ್ಲಿರುವ ಮೈಸೂರು-ಬೆಂಗಳೂರು ದಶಪಥ ಹೆದ್ದಾರಿಯಲ್ಲಿ ಪುಂಡರ ಬೈಕ್ ವ್ಹೀಲಿಂಗ್ ನಡೆಯುತ್ತಿದೆ.

Advertisement

ಇದೀಗ ವ್ಹೀಲಿಂಗ್ ಮಾಡಿದ ಶೂರನೊಬ್ಬ ಅದರ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿ ಸ್ವತಃ ಸಿಕ್ಕಿಬಿದ್ದಿದ್ದಾನೆ.

ಬಿಡದಿ ಠಾಣಾ ವ್ಯಾಪ್ತಿಯಲ್ಲಿ ಕೇತಗಾನಹಳ್ಳಿ ಬಳಿಯ ಎಕ್ಸ್ ಪ್ರೆಸ್ ವೇಯಲ್ಲಿ ವ್ಹೀಲಿಂಗ್ ಮಾಡಿ ಪುಂಡಾಟ ಮೆರೆದ ದರ್ಶನ್ ಎಂಬಾತನ ಮೇಲೆ ಪ್ರಕರಣ ದಾಖಲಾಗಿದೆ.

ಈತ ಡಿಯೋ ಸ್ಕೂಟಿಯಲ್ಲಿ ಹೆಲ್ಮೆಟ್ ಕೂಡಾ ಧರಿಸಿದೆ ವ್ಹೀಲಿಂಗ್ ಮಾಡಿದ್ದಾನೆ. ಅಷ್ಟೇ ಅಲ್ಲದೆ ತನ್ನ ವ್ಹೀಲಿಂಗ್ ಮಾಡಿದ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾನೆ. ಈ ಪೋಸ್ಟ್ ವಿಡಿಯೋ ಆಧರಿಸಿ ವ್ಹೀಲಿಂಗ್ ಶೂರನ ಮೇಲೆ ಕೇಸ್ ದಾಖಲು ಮಾಡಲಾಗಿದೆ. ಬಿಡದಿ ಠಾಣೆ ಪೊಲೀಸರು ಮೋಟಾರ್ ವೆಹಿಕಲ್ ಆಕ್ಟ್ ಅಡಿ ಕೇಸು ಜಡಿದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next