Advertisement

ಸಾಗರ: ವಿದ್ಯಾರ್ಥಿ ನಿಲಯದಲ್ಲಿ ನಿಲ್ಲಿಸಿದ್ದ ದ್ವಿಚಕ್ರ ವಾಹನ ಕಳವು

12:56 PM Jun 05, 2022 | Suhan S |

ಸಾಗರ: ಇಲ್ಲಿನ ವರದಹಳ್ಳಿ ರಸ್ತೆಯಲ್ಲಿನ ಈಡಿಗ ಸಮುದಾಯ ಭವನದ ಸಮೀಪದ ಹಿಂದುಳಿದ ವರ್ಗಗಳ ವಸತಿ ನಿಲಯದಲ್ಲಿ ನಿಲ್ಲಿಸಿದ್ದ ವಿದ್ಯಾರ್ಥಿಯೊಬ್ಬನ ದ್ವಿಚಕ್ರ ವಾಹನ ಕಳ್ಳತನ ಆಗಿದೆ.

Advertisement

ಮೇ 31 ರಂದು ರಾತ್ರಿ ಪ್ರಜ್ವಲ್ ತಮ್ಮ ದ್ವಿಚಕ್ರ ವಾಹನವನ್ನು ವಸತಿ ನಿಲಯದ ಆವರಣದಲ್ಲಿ ನಿಲ್ಲಿಸಿದ್ದರು. ಜೂ. 1 ರಂದು ಬೆಳಿಗ್ಗೆ ನೋಡಿದಾಗ ವಾಹನ ಕಳ್ಳತನ ಆಗಿರುವ ವಿಷಯ ತಿಳಿದುಬಂದಿದೆ. ಪರಿಚಿತರಲ್ಲಿ ವಿಚಾರಿಸಿದರೂ ಮಾಹಿತಿ ಸಿಗದ ಕಾರಣ ಪ್ರಜ್ವಲ್ ನಗರ ಠಾಣೆಯಲ್ಲಿ ಶನಿವಾರ ದೂರು ನೀಡಿದ್ದಾರೆ.

ದೊಂಬೆ ಗ್ರಾಮದಲ್ಲಿ ಅಡಕೆ ಕಳ್ಳತನ :

ಸಾಗರ: ತಾಲೂಕಿನ ಖಂಡಿಕಾ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ದೊಂಬೆ ಗ್ರಾಮದಲ್ಲಿ ಅಡಕೆ ಕಳ್ಳತನ ನಡೆದಿದ್ದು, ಈ ಸಂಬಂಧ ಗ್ರಾಮಾಂತರ ಠಾಣೆಯಲ್ಲಿ ಶನಿವಾರ ಪ್ರಕರಣ ದಾಖಲಾಗಿದೆ.

ಗಜಾನನ ಎಂಬುವವರಿಗೆ ಸೇರಿದ ಕೆಂಪು, ಸಿಪ್ಪೆಗೋಟು ವಿಧಗಳ ಒಟ್ಟು ಆರು ಮುಕ್ಕಾಲು ಕ್ವಿಂಟಾಲ್ ಅಡಕೆ ಕಳ್ಳತನ ಆಗಿದೆ. ಮೇ 31ರಂದು ಎದುರು ಇಟ್ಟಿದ್ದ ಅಡಕೆ ಕಳ್ಳತನ ಆಗಿರುವುದು ಶನಿವಾರ ತಿಳಿದುಬಂದಿದೆ. ಅಂದಾಜು 2.40 ಲಕ್ಷ ರೂ. ಮೌಲ್ಯದ ಅಡಕೆ ಕಳ್ಳತನ ಆಗಿದೆ ಎಂದು ಗಜಾನನ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next