Advertisement

250 ಮೀಟರ್‌ ಎಳೆದೊಯ್ದ ಲಾರಿ ; ಬೈಕ್‌ ಸವಾರರಿಬ್ಬರು ಛಿದ್ರ ಛಿದ್ರ 

01:06 PM Aug 12, 2018 | |

ಮಂಡ್ಯ: ನಗರದ ಹೊರವಲಯದ ವಿ.ಸಿ. ಫಾರಂ ಗೇಟ್‌ ಬಳಿ ಹೆದ್ದಾರಿಯಲ್ಲಿ ಇಬ್ಬರು ಬೈಕ್‌ ಸವಾರರು ಲಾರಿ ಚಕ್ರಕ್ಕೆ ಸಿಲುಕಿ ದಾರುಣವಾಗಿ ಸಾವನ್ನಪ್ಪಿದ ರಣಭೀಕರ ಅಪಘಾತ ಭಾನುವಾರ ಬೆಳ್ಳಂಬೆಳಗ್ಗೆ ನಡೆದಿದೆ. 

Advertisement

ಕಂಠಪೂರ್ತಿ ಕುಡಿದ  ಚಾಲಕ ಯದ್ವಾತದ್ವಾ ಲಾರಿ ಚಲಾಯಿಸಿದ್ದೇ ಅವಘಡಕ್ಕೆ ಕಾರಣವಾಗಿದ್ದು, ಲಾರಿಯಡಿ ಬಿದ್ದ ಇಬ್ಬರನ್ನು ಬೈಕ್‌ ಸಮೇತ 250 ಮೀಟರ್‌ ಎಳೆದೊಯ್ದಿದ್ದು  ಇಬ್ಬರ ದೇಹವೂ ಛಿದ್ರ ಛಿದ್ರಗೊಂಡಿದೆ ಎಂದು ತಿಳಿದು ಬಂದಿದೆ. 

250 ಮೀಟರ್‌ ತೆರಳಿದ ಬಳಿಕ ಚಕ್ರದಲ್ಲಿ ಬೈಕ್‌ ಇರುವುದು ಅರಿವಾಗಿ ಲಾಯಿ ನಿಲ್ಲಿಸಿ ಗದ್ದೆಯಲ್ಲಿ  ಇಳಿದು ಪರಾರಿಯಾಗಲು ಯತ್ನಿಸಿದ ಚಾಲಕನನ್ನು ಸಾರ್ವಜನಿಕರು ಹಿಡಿದು ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಕಂಠಪೂರ್ತಿ ಕುಡಿದು ಅಮಲಿನಲ್ಲಿ ನಿಲ್ಲಲೂ ಸಾಧ್ಯವಿಲ್ಲದ ಸ್ಥಿತಿಯಲ್ಲಿ ಚಾಲಕ ಬಿದ್ದುಕೊಂಡಿದ್ದ. 

ಮಂಡ್ಯ ಗ್ರಾಮಾಂತರ ಠಾಣೆಯ ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮೃತರ ಗುರುತು ಇನ್ನಷ್ಟೇ ತಿಳಿದು ಬರಬೇಕಿದೆ. 

Advertisement

Udayavani is now on Telegram. Click here to join our channel and stay updated with the latest news.

Next