Advertisement

Ram Mandir ಪ್ರಾಣ ಪ್ರತಿಷ್ಠೆ ಪ್ರಶ್ನಿಸುತ್ತಿದ್ದಂತೆ ಕುಸಿದುಬಿದ್ದ ವೇದಿಕೆ!;Viral Video

04:14 PM Jan 20, 2024 | Team Udayavani |

ಗಯಾ: ಬಿಹಾರದ ದಿಹುರಿ ಗ್ರಾಮದಲ್ಲಿ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಭಾಷಣ ಮಾಡುತ್ತಿದ್ದ ಮುಖಂಡರೊಬ್ಬರು ಅಯೋಧ್ಯೆಯ ರಾಮಮಂದಿರದ ‘ಪ್ರಾಣ ಪ್ರತಿಷ್ಠಾ ಕಾರ್ಯಕ್ರಮದ ಕುರಿತು ಟೀಕಿಸಲು ಪ್ರಾರಂಭಿಸುತ್ತಿದ್ದಂತಯೇ ಹಠಾತ್ ವೇದಿಕೆ ಕುಸಿದುಬಿದ್ದ ಘಟನೆ ನಡೆದಿದ್ದು ವಿಡಿಯೋ ವೈರಲ್ ಆಗುತ್ತಿದೆ.

Advertisement

ಸ್ವಾತಂತ್ರ್ಯ ಹೋರಾಟಗಾರ ಅಬ್ದುಲ್ ಕ್ವಾಮ್ ಅನ್ಸಾರಿ ಅವರ 51 ನೇ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ನಾಯಕರು ಜಮಾಯಿಸಿದ ಪಸ್ಮಾಂಡ ವಂಚಿತ್ ಮಹಾಸಂಗಟನ್ ಸಂದರ್ಭದಲ್ಲಿ ಈ ಘಟನೆ ನಡೆದಿದೆ.

ಕಾರ್ಯಕ್ರಮಕ್ಕೆ ಆಯೋಜಕರು ಸಾಕಷ್ಟು ವೇದಿಕೆ ನಿರ್ಮಿಸಿದ್ದು, ವೇದಿಕೆ ಕುಸಿದಾಗ ಆರ್‌ಜೆಡಿ ಮಾಜಿ ಸಂಸದ ಅಲಿ ಅನ್ವರ್ ಅನ್ಸಾರಿ ಕೂಡ ವೇದಿಕೆಯಲ್ಲಿದ್ದರು.

ಸ್ಥಳೀಯರೊಬ್ಬರು ಮಾತನಾಡುತ್ತಿದ್ದ ವೇಳೆ ”ಜನವರಿ 22 ರಂದು ಶ್ರೀ ರಾಮಚಂದ್ರ ಜೀ ಅವರ ಪಟ್ಟಾಭಿಷೇಕ ಕಾರ್ಯಕ್ರಮವನ್ನು ಮತ ಸೆಳೆಯಲು ಆಯೋಜಿಸಲಾಗಿದೆ. ಶ್ರೀರಾಮಚಂದ್ರ ಜೀ ಹುಟ್ಟಿದ ದಿನವನ್ನು ಏಕೆ ಆಚರಿಸುವುದಿಲ್ಲ ಎಂಬುದು ಪ್ರಶ್ನೆ. ಹೀಗೆ ಹೇಳಿದ ಕೂಡಲೇ ವೇದಿಕೆ ಕುಸಿದುಬಿದ್ದಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next