Advertisement

ವರದಕ್ಷಿಣೆ ಇರುವ ಮದುವೆಗೆ ಹೋಗಲ್ಲ: ನಿತೀಶ್‌ ಕುಮಾರ್‌

07:35 PM Dec 23, 2021 | Team Udayavani |

ಪಾಟ್ನಾ: ಬಿಹಾರ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಇನ್ನು ಮುಂದೆ ಎಲ್ಲಾ ರೀತಿಯ ಮದುವೆಗಳಿಗೆ ಹೋಗುವುದಿಲ್ಲ.

Advertisement

ವರದಕ್ಷಿಣೆ ಪಡೆದುಕೊಂಡಿಲ್ಲ ಎಂದು ಎರಡೂ ಕುಟುಂಬಗಳು ಬಹಿರಂಗವಾಗಿ ಘೋಷಿಸಿಕೊಂಡಿದ್ದರೆ ಮಾತ್ರ ಅಂಥ ಮದುವೆಯಲ್ಲಿ ಭಾಗವಹಿಸಲು ತೀರ್ಮಾನ ಮಾಡಿದ್ದಾರೆ.

ಪೂರ್ವ ಚಂಪಾರಣ್‌ ಜಿಲ್ಲೆಯ ಮೋತಿಹಾರಿಯಲ್ಲಿ ಸಮಾಜ ಸುಧಾರಣೆ ಅಭಿಯಾನ ಉದ್ಘಾಟಿಸಿ ಮಾತನಾಡಿದ ಸಂದರ್ಭದಲ್ಲಿ ಸಿಎಂ ನಿತೀಶ್‌ ಕುಮಾರ್‌ ಈ ಮಾತುಗಳನ್ನಾಡಿದ್ದಾರೆ.

ಮದುವೆಯ ಆಹ್ವಾನಪತ್ರಿಕೆಯಲ್ಲಿ ವರದಕ್ಷಿಣೆ ತೆಗೆದುಕೊಂಡಿಲ್ಲ ಎಂಬ ಘೋಷಣೆಯನ್ನು ಮುದ್ರಿಸಿದ್ದರೆ ಮಾತ್ರ ಅಂಥವುಗಳಿಗೆ ತೆರಳುವುದಾಗಿ ಪ್ರಕಟಿಸಿದರು.

ಇದನ್ನೂ ಓದಿ:ಪವಿತ್ರ ಗೋವು ನಮ್ಮ ತಾಯಿ, ಹಾಸ್ಯದ ವಸ್ತುವಲ್ಲ : ಪ್ರಧಾನಿ ಮೋದಿ ಕಿಡಿ

Advertisement
Advertisement

Udayavani is now on Telegram. Click here to join our channel and stay updated with the latest news.

Next