Advertisement

Bihar:ಗಂಗಾ ನದಿಯಲ್ಲಿ ಮುಳುಗಿದ 17 ಭಕ್ತರಿದ್ದ ದೋಣಿ,6 ಮಂದಿ ನಾಪತ್ತೆ

03:34 PM Jun 16, 2024 | Team Udayavani |

ಪಾಟ್ನಾ: ಬಿಹಾರದ ಬರ್ಹ್‌ನಲ್ಲಿ ಉಮಾನಾಥ ಘಾಟ್‌ನಿಂದ ಡಿಯಾರಾಗೆ ತೆರಳುತ್ತಿದ್ದ 17 ಭಕ್ತರಿದ್ದ ದೋಣಿಯೊಂದು ಭಾನುವಾರ ಬೆಳಗ್ಗೆ ಗಂಗಾ ನದಿಯಲ್ಲಿ ಮುಳುಗಿದೆ. ಇದುವರೆಗೆ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಆದರೆ, ಆರು ಮಂದಿ ನಾಪತ್ತೆಯಾಗಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಶೋಧ ಕಾರ್ಯಾಚರಣೆ ನಡೆಯುತ್ತಿದೆ.

Advertisement

“ಪುಟ್ಟ ದೋಣಿಯೊಂದು ಮಗುಚಿ ಬಿದ್ದಿದ್ದು, ಅದರಲ್ಲಿ 17 ಮಂದಿ ಇದ್ದರು, ಅದರಲ್ಲಿ 11 ಮಂದಿ ಸುರಕ್ಷಿತವಾಗಿ ಮೇಲಕ್ಕೆ ಬಂದಿದ್ದಾರೆ, 6 ಮಂದಿ ನಾಪತ್ತೆಯಾಗಿದ್ದಾರೆ. ಎಸ್‌ಡಿಆರ್‌ಎಫ್ ತಂಡ ಶೋಧ ಕಾರ್ಯಾಚರಣೆ ನಡೆಸುತ್ತಿದೆ ಎಂದು ಬಾರ್ಹ್ ಉಪ ವಿಭಾಗೀಯ ಮ್ಯಾಜಿಸ್ಟ್ರೇಟ್ (SDM) ಶುಭಂ ಕುಮಾರ್ ಅವರು ಸುದ್ದಿ ಸಂಸ್ಥೆ ANI ಗೆ ಹೇಳಿಕೆ ನೀಡಿದ್ದಾರೆ.

ಉಮಾನಾಥ ಗಂಗಾ ಘಾಟ್ ಬಳಿ ಬೆಳಗ್ಗೆ 9.15 ರ ಸುಮಾರಿಗೆ ಘಟನೆ ನಡೆದಿದ್ದು,ಒಂದೇ ಕುಟುಂಬಕ್ಕೆ ಸೇರಿದ 17 ಜನರನ್ನು ಹೊತ್ತೊಯ್ಯುತ್ತಿದ್ದ ದೋಣಿ ಮಧ್ಯದಲ್ಲಿ ಪಲ್ಟಿಯಾಗಿದೆ ಎಂದು ಕುಮಾರ್ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next