Advertisement

ಗಂಗಾ ನದಿಯಲ್ಲಿ ದೋಣಿ ಅವಘಡ:15 ಮಂದಿ ರಕ್ಷಣೆ, ಆರು ಮಂದಿ ನಾಪತ್ತೆ, ರಕ್ಷಣಾ ಕಾರ್ಯ ಚುರುಕು

01:48 PM Oct 23, 2022 | Team Udayavani |

ಪಾಟ್ನಾ : ದೀಪಾವಳಿಗೆ ಒಂದು ದಿನ ಮುಂಚಿತವಾಗಿ ಬಿಹಾರದ ರಾಜಧಾನಿ ಪಾಟ್ನಾದಲ್ಲಿ ದೊಡ್ಡ ಅವಘಡವೊಂದು ಸಂಭವಿಸಿದೆ. ಭಾನುವಾರ ಬೆಳಗ್ಗೆ ಗಂಗಾನದಿಯಲ್ಲಿ ದೋಣಿಯೊಂದು ಮಗುಚಿ ಬಿದ್ದು 6 ಮಂದಿ ನಾಪತ್ತೆಯಾಗಿದ್ದು, ಹದಿನೈದು ಮಂದಿಯನ್ನು ರಕ್ಷಿಸಿದ ಘಟನೆ ದಿಘಾದಲ್ಲಿರುವ ಜೆಪಿ ಸೇತು ಪಿಲ್ಲರ್ ನಂಬರ್ 10 ಬಳಿ ನಡೆದಿದೆ.

Advertisement

ದೋಣಿಯಲ್ಲಿ ಒಟ್ಟು 21 ಮಂದಿ ಇದ್ದರು ಎನ್ನಲಾಗಿದ್ದು ನಿಯಂತ್ರಣ ಕಳೆದು ಮುಳುಗಿದೆ ಈ ವೇಳೆ ಸ್ಥಳೀಯರು ಹದಿನೈದು ಮಂದಿಯನ್ನು ರಕ್ಷಣೆ ಮಾಡಿ ದಡಕ್ಕೆ ತರುವಲ್ಲಿ ಯಶಸ್ವಿಯಾಗಿದ್ದಾರೆ. ಘಟನೆಯಲ್ಲಿ ಆರು ಮಂದಿ ನಾಪತ್ತೆಯಾಗಿದ್ದು ಎಸ್‌ಡಿಆರ್‌ಎಫ್ ತಂಡ, ಸ್ಥಳೀಯರು ಹಾಗೂ ಪೊಲೀಸರ ತಂಡ ಹುಡುಕಾಟ ನಡೆಸುತ್ತಿದೆ.

ಸೇತುವೆಯ ಪಿಲ್ಲರ್‌ಗೆ ದೋಣಿ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಬೆಳಗ್ಗೆ ಸುಮಾರು 7 ಗಂಟೆಗೆ ಅವಘಡ ಸಂಭವಿಸಿದೆ. ದೋಣಿ ಪಲ್ಟಿಯಾಗುತ್ತಿರುವುದನ್ನು ಕಂಡು ಜನರನ್ನು ರಕ್ಷಿಸಲು ನದಿಗೆ ಹಾರಿ ಹೆಚ್ಚಿನವರನ್ನು ರಕ್ಷಿಸಿದೆವು. ಘಟನೆ ಬಳಿಕ ಪೊಲೀಸರು ಸ್ಥಳಕ್ಕೆ ಆಗಮಿಸಿದರು. ಬಳಿಕ ಎಸ್‌ಡಿಆರ್‌ಎಫ್ ತಂಡವನ್ನೂ ಕರೆಯಲಾಗಿದೆ. ಸದ್ಯ ಸ್ಥಳೀಯರ ನೆರವಿನಿಂದ ರಕ್ಷಣಾ ಕಾರ್ಯ ನಡೆಯುತ್ತಿದೆ. ಗಂಗಾನದಿಯಲ್ಲಿ ನೀರಿನ ಮಟ್ಟ ಹೆಚ್ಚಾಗಿರುವುದರಿಂದ ರಕ್ಷಣಾ ಕಾರ್ಯಕ್ಕೆ ಸಮಸ್ಯೆ ಉಂಟಾಗಿದೆ ಎಂದು ಹೇಳಲಾಗಿದೆ.

ಇದನ್ನೂ ಓದಿ : ಬೆಳ್ಳಂಬೆಳಗ್ಗೆ ಆಗ್ರಾ-ಲಕ್ನೋ ಎಕ್ಸ್‌ಪ್ರೆಸ್‌ವೇನಲ್ಲಿ ಭೀಕರ ಅಪಘಾತ :4 ಸಾವು, 46ಮಂದಿಗೆ ಗಾಯ

Advertisement

Udayavani is now on Telegram. Click here to join our channel and stay updated with the latest news.

Next