Advertisement

BBK10: ಹೊರಗಡೆ ಇದ್ದ ಸೌಂಡ್ ಇಲ್ಲೇನಿಲ್ಲ.. ಕಿಚ್ಚನ ಟಾಂಗ್ ಗೆ ಮೌನವಾದ ರಕ್ಷಕ್

08:00 PM Jan 27, 2024 | Team Udayavani |

ಬೆಂಗಳೂರು: ಬಿಗ್ ಬಾಸ್ ಕನ್ನಡ ಸೀಸನ್ -10 ಫಿನಾಲೆ ಆರಂಭವಾಗಿದೆ. ಕಿಚ್ಚ ಸುದೀಪ್ ಸ್ಟೈಲಿಸ್ಟ್ ಲುಕ್ ನಲ್ಲಿ ವೇದಿಕೆಗೆ ಬಂದರು.

Advertisement

ಕಾರ್ಯಕ್ರಮದಲ್ಲಿ ಭಾಗಿಯಾಗಿ ಎಲಿಮಿನೇಟ್ ಆದ ಸ್ಪರ್ಧಿಗಳನ್ನು ಮೊದಲನೆಯದಾಗಿ ಕಿಚ್ಚ ಮಾತನಾಡಿಸಿದರು.

ಹೊರಗಡೆ ಯಾವ ರೀತಿಯ ರೆಸ್ಪಾನ್ಸ್ ನಿಮಗೆ ಸಿಕ್ಕಿತು ಎಂದಾಗ ಒಬ್ಬೊಬ್ಬರಾಗಿ ತಮ್ಮ ಮಾತುಗಳಲ್ಲಿ ಅನುಭವವನ್ನು ಹಂಚಿಕೊಂಡರು.

ರಕ್ಷಕ್ ಬುಲೆಟ್ ಎಲಿಮಿನೇಟ್ ಆದ ಬಳಿಕ, ನಾನಾ ಸಂದರ್ಶನದಲ್ಲಿ ಭಾಗಿಯಾಗಿದ್ದರು. ಈ ವೇಳೆ ಬಿಗ್ ಬಾಸ್ ಹಾಗೂ ಕಿಚ್ಚನ ಬಗ್ಗೆ ಅವರು ಆಡಿದ ಮಾತುಗಳು ಸದ್ದು ಮಾಡಿತು. ಇದು ಕಿಚ್ಚನ ಕಿವಿಗೂ ಮುಟ್ಟಿತು.

ಇದೇ ಮಾತನ್ನು ಉದ್ದೇಶಿಸಿ ಕಿಚ್ಚ ರಕ್ಷಕ್ ಬಳಿ, ಹೊರಗಡೆ ಇದ್ದ ಸೌಂಡ್ ಇಲ್ಲೇನಿಲ್ಲ ಎಂದು ಕೇಳಿದರು. ಇದಕ್ಕೆ ಪ್ರೇಕ್ಷಕರು ಕಿಚ್ಚ ಟಾಂಗ್ ಕೇಳಿ ಚಪ್ಪಾಳೆ ತಟ್ಟಿದರು. ಇದಕ್ಕೆ ರಕ್ಷಕ್ ಮೊದಲು ಕ್ಷಮೆ ಕೇಳಲು ಹೊರಟರು. ಆದರೆ ಕಿಚ್ಚ ಕ್ಷಮೆಯ ನಡುವೆಯೇ ಪ್ರಶ್ನೆ ಮಾಡಿದರು. ಮುಂದುಗಡೆ ಇದ್ದಾಗ ರೆಸ್ಪಾಟ್ ಜಾಸ್ತಿ ಎಂದು ಕಿಚ್ಚನಿಗೆ ಹೇಳಿದರು.

Advertisement

ಆ ಬಳಿಕ ಯಾರು ಗೆಲ್ಲಬೇಕು, ಯಾರು ಹೊರಬರಬೇಕು ಎಂದು ಸ್ಪರ್ಧೆಗಳಲ್ಲಿ ಕೇಳಿದರು. ಇದಕ್ಕೆ ಸಿರಿ, ಭಾಗ್ಯಶ್ರೀ, ಗೌರೀಶ್, ಸ್ನೇಕ್ ಶ್ಯಾಮ್, ತನಿಷಾ, ನಮೃತಾ, ಸ್ನೇಹಿತ್ ಸೇರಿದಂತೆ ವಿನಯ್, ಕಾರ್ತಿಕ್ ಹಾಗೂ ಸಂಗೀತಾ ಗೆಲ್ಲಬಹುದೆಂದು ಒಬ್ಬೊಬ್ಬರು ಹೇಳಿದರು.

ತುಕಾಲಿ ಸಂತೋಷ್ ಮನೆಯಿಂದ ಮೊದಲು ಆಚೆ ಬರಬಹುದೆಂದು ಹೇಳಿದರು. ಇದಕ್ಕೆ ಕಿಚ್ಚ ಕಾದು ನೋಡುವ ಎಂದರು.

 

Advertisement

Udayavani is now on Telegram. Click here to join our channel and stay updated with the latest news.

Next