Advertisement

BBK-11: ಬಿಗ್‌ಬಾಸ್‌ ಮನೆಯಲ್ಲಿ ಆ ʼಡೌಟ್‌ʼನಿಂದಲೇ ಶುರುವಾಯಿತು ಜಗಳ

03:52 PM Oct 01, 2024 | Team Udayavani |

ಬೆಂಗಳೂರು: ಬಿಗ್‌ ಬಾಸ್‌(Bigg Boss Kannada-11) ಆರಂಭಗೊಂಡು ಒಂದು ದಿನ ಕಳೆದಿದೆ. ಆದರೆ ಈ ಒಂದು ದಿನದಲ್ಲಿ ಸ್ಪರ್ಧಿಗಳು ಅನೇಕ ಸಲಿ ಕಿತ್ತಾಡಿಕೊಂಡಿದ್ದಾರೆ.

Advertisement

ಈ ಬಾರಿ ಸ್ವರ್ಗ ಹಾಗೂ ನರಕ ಎಂಬ ಎರಡು ಮನೆಗಳಿವೆ. ನರಕದಲ್ಲಿನ 7 ಮಂದಿ, ಸ್ವರ್ಗದಲ್ಲಿನ 10 ಮಂದಿ ತಂಡದಂತೆ ಇದ್ದಾರೆ. ಆದರೆ ಈ ತಂಡಗಳ ಒಳಗೆಯೇ ಹೊಂದಾಣಿಕೆಯಿಲ್ಲದೆ ಮಾತಿಗೆ ಮಾತು ಬೆಳೆಯುತ್ತಿದೆ.

ಮೊದಲ ದಿನ ಯಮುನಾ, ಜಗದೀಶ್‌ ಹಾಗೂ ಚೈತ್ರಾ ಕುಂದಾಪುರ ಅವರ ಧ್ವನಿಯೇ ಹೆಚ್ಚಾಗಿ ಬಿಗ್‌ ಬಾಸ್‌ ಮನೆಯಲ್ಲಿ ಸದ್ದು ಮಾಡಿದೆ. ಉಳಿದ ಸ್ಪರ್ಧಿಗಳ ನಡುವೆಯೋ ಸಣ್ಣ ಸಣ್ಣ ಕಾರಣಕ್ಕೆ ಮಾತಿಗೆ ಮಾತು ಬೆಳೆದಿದೆ.

ಇದನ್ನೂ ಓದಿ: BBK11: ಬಿಗ್‌ಬಾಸ್‌ ಮನೆಗೆ ಮತ್ತೆ ಹುಲಿ ಉಗುರು ಸಂಕಷ್ಟ? ಗೋಲ್ಡ್‌ ಸುರೇಶ್‌ ಬಳಿ ಇರುವುದೇನು?

ನರಕ ನಿವಾಸಿಗಳಾಗಿರುವ ಮಾನಸ ಹಾಗೂ ಚೈತ್ರಾ ಅವರ ನಡುವೆ ಧ್ಯಾನದ ವಿಚಾರಕ್ಕೆ ಜಗಳ ನಡೆದಿದೆ.

Advertisement

ನನಗೆ ಈ ಧ್ಯಾನ ಮಾಡುತ್ತಾರೆ ಅಲ್ವಾ ಅವರ ಮೇಲೆ ಒಂಚೂರು ಡೌಟ್‌ ಇರುತ್ತೆ. ಇದು ಮಾಡುತ್ತಾ ಇದ್ದಾರ ಅಲ್ವಾ ಅಂಥ ಹೇಳಿ ಮಾನಸ ಅವರು ನಕ್ಕಿದ್ದಾರೆ.

ಇದನ್ನು ಕೇಳಿದ ಚೈತ್ರಾ ಅವರು “ನಿಮ್ಮದ್ದೆಷ್ಟು ಇದೆ ನೀವು ನೋಡ್ಕೊಳ್ಳಿ ಅನುಮಾನ ಅಂಥ ಜಡ್ಜ್‌ ಮೆಂಟ್‌ ಕೊಡ್ಬೇಡಿ. ಮಾತನಾಡಕ್ಕೂ ಒಂದು ಲೆವೆಲ್‌ ಬೇಕು. ನಾನು ಏನು ಮಾಡಿದರೂ ಅದು ತಪ್ಪು ಅದು ತಪ್ಪು ಅನ್ನೋಕೆ ಇವರು ಯಾರು ಹೇಳೋಕೆ” ಎಂದು ಚೈತ್ರಾ ಪ್ರಶ್ನೆ ಮಾಡಿರುವುದನ್ನು ಪ್ರೋಮೊದಲ್ಲಿ ತೋರಿಸಲಾಗಿದೆ.

ನನಗೆ ಜ್ಞಾನವಿಲ್ಲ ಅಲ್ಪ ಜ್ಞಾನಿ ನಾನು. ಜ್ಞಾನವಿಲ್ಲ ಅಂದ್ರೆ ಮಾತನಾಡಬಾರದು ಎಂದು ಹೇಳಿ ಮಾನಸ ಅವರ ಚೈತ್ರಾ ಗರಂ ಆಗಿರುವುದನ್ನು ಪ್ರೋಮೊದಲ್ಲಿ ತೋರಿಸಲಾಗಿದೆ.

ಇದಲ್ಲದೆ ಇಂದು ಉಳಿದ ಸ್ಪರ್ಧಿಗಳ ನಾಮಿಷೇನ್‌ ಪ್ರಕ್ರಿಯೆ ನಡೆಯಲು ಟಾಸ್ಕ್‌ ನೀಡಲಾಗುತದೆ. ಈ ನಡುವೆ ನರಕ – ಸ್ವರ್ಗದ ಸ್ಪರ್ಧಿಗಳಾದ ಯಮುನಾ ಹಾಗೂ ಶಿಶಿರ್‌ ನಡುವೆ ಮಾತಿನ ಚಕಮಕಿ ನಡೆಯುವುದನ್ನು ಮತ್ತೊಂದು ಪ್ರೋಮೊದಲ್ಲಿ ತೋರಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next