Advertisement

ರೈತರಲ್ಲಿ ಮಂದಹಾಸ ತಂದ ಮುಂಗಾರು

12:45 PM Jun 11, 2020 | Naveen |

ಬೀದರ: ಸದಾ ಪ್ರಕೃತಿ ವಿಕೋಪದಿಂದ ನಲುಗಿ ಹೋಗುತ್ತಿರುವ ಗಡಿನಾಡು ಬೀದರನಲ್ಲಿ ಮುಂಗಾರು ಮಳೆ ಆಗಮನ ನೊಂದ ರೈತರಲ್ಲಿ ಹೊಸ ಭರವಸೆ ಮೂಡಿಸಿದೆ. ಜಿಲ್ಲಾದ್ಯಂತ ಬುಧವಾರ ಉತ್ತಮ ಮಳೆ ಸುರಿದಿದ್ದು, ರೈತರನ್ನು ಕೃಷಿ ಚಟುವಟಿಕೆಗೆ ಅಣಿಗೊಳಿಸುವಂತೆ ಮಾಡಿದೆ.

Advertisement

ಮುಂಗಾರು ಪೂರ್ವ ಮಳೆ ಕೊರತೆ ಎದುರಿಸಿದ್ದ ಜಿಲ್ಲೆಯಲ್ಲಿ ಎರಡು ದಿನ ತಡವಾದರೂ ಬುಧವಾರ ಉತ್ತಮವಾಗಿ ಮುಂಗಾರು ಮಳೆ ಸುರಿದಿದೆ. ಬೀದರ ನಗರ ಸೇರಿದಂತೆ ಜಿಲ್ಲೆಯ ಎಲ್ಲ ಕಡೆಗಳಲ್ಲಿ ಮಧ್ಯಾಹ್ನದ ವೇಳೆ ಗುಡುಗು, ಗಾಳಿ ಆರ್ಭಟದೊಂದಿಗೆ ವರ್ಷಧಾರೆ ಆಗಿದ್ದು, ಅನ್ನದಾತರು ನಿಟ್ಟಿಸಿರು ಬಿಡುವಂತಾಗಿದೆ.

ಮುಂಗಾರು ಮಾರುತ ಪ್ರವೇಶಿಸಿದ್ದರೆ, ಇನ್ನೊಂದೆಡೆ ರೈತರು ಈಗಾಗಲೇ ಮುಂಗಾರು ಬಿತ್ತನೆಗೆ ಹೊಲ ಸಜ್ಜುಗೊಳಿಸಿದ್ದಾರೆ. ಬಿತ್ತನೆ ಬೀಜ, ರಸಗೊಬ್ಬರ ಸೇರಿದಂತೆ ಅಗತ್ಯ ತಯಾರಿ ಮಾಡಿಕೊಂಡಿದ್ದಾರೆ. ಹೀಗೆ ಇನ್ನೆರಡು ದಿನ ಮಳೆ ಸುರಿದು ಕೊಂಚ ಬಿಡುವು ನೀಡಿದರೆ ಬಿತ್ತನೆ ಚಟುವಟಿಕೆ ಶುರು ಮಾಡಿಕೊಳ್ಳಬಹುದು.

ಇನ್ನು ಭಾರೀ ಮಳೆಗೆ ನಗರದ ರಸ್ತೆಗಳು ಸಂಪೂರ್ಣ ಜಲಾವೃತಗೊಂಡಿದ್ದವು. ತಗ್ಗು ಪ್ರದೇಶಕ್ಕೆ ನೀರು ನುಗ್ಗಿ ಕೆಲ ಕಾಲ ಕಿರಿಕಿರಿ ಅನುಭವಿಸುವಂತಾಯಿತು. ಇಲ್ಲಿನ ಹರಳಯ್ಯ ವೃತ್ತ, ಅಂಬೇಡ್ಕರ್‌ ವೃತ್ತ, ಶಿವಾಜಿ ವೃತ್ತ ಸೇರಿ ಇನ್ನಿತರ ಕಡೆಗಳಲ್ಲಿ ನೀರು ನಿಂತು ಸಂಚಾರಕ್ಕೆ ಅಡ್ಡಿಯಾಯಿತು. ಚರಂಡಿಗಳಲ್ಲಿ ಹೂಳು ತುಂಬಿದ್ದರಿಂದ ಚರಂಡಿ ನೀರು ರಸ್ತೆಯಲ್ಲೇ ಹರಿಯಿತು.

Advertisement

Udayavani is now on Telegram. Click here to join our channel and stay updated with the latest news.

Next