Advertisement

ಕೆಲಸ ಕೊಡಿಸುವ ನೆಪ: ನಿಲ್ದಾಣದಲ್ಲೇ ಇಬ್ಬರು ರೈಲ್ವೆ ಅಧಿಕಾರಿಗಳಿಂದ ಯುವತಿಯ ಅತ್ಯಾಚಾರ

12:58 PM Sep 27, 2020 | sudhir |

ಭೋಪಾಲ್ : ಉತ್ತರ ಪ್ರದೇಶದ 22 ವರ್ಷದ ಯುವತಿಯೊಬ್ಬಳಿಗೆ ಕೆಲಸ ಕೊಡಿಸುವ ನೆಪದಲ್ಲಿ ಆಕೆಗೆ ಪಾನೀಯದಲ್ಲಿ ಮತ್ತು ಬರುವ ಔಷಧಿ ನೀಡಿ ಇಬ್ಬರು ರೈಲ್ವೆ ಅಧಿಕಾರಿಗಳು ರೈಲ್ವೆ ನಿಲ್ಡಾದಲ್ಲೇ ಅತ್ಯಾಚಾರ ಎಸಗಿದ ಘಟನೆ ಭೋಪಾಲ್ ರೈಲು ನಿಲ್ದಾಣದಲ್ಲಿ ನಡೆದಿದೆ.

Advertisement

ಪೊಲೀಸ್ ಅಧಿಕಾರಿ ಹಿತೇಶ್ ಚೌಧರಿ ಹೇಳಿಕೆಯಂತೆ ಘಟನೆಗೆ ಕುರಿತಂತೆ ರೈಲ್ವೆ ಅಧಿಕಾರಿಯಾದ ರಾಜೇಶ್ ತಿವಾರಿ(45) ಯನ್ನು ವಶಕ್ಕೆ ಪಡೆದಿದ್ದೇವೆ ಎಂದಿದ್ದಾರೆ.

ಉತ್ತರ ಪ್ರದೇಶದ ಯುವತಿಗೆ ಭೋಪಾಲ್ ರೈಲ್ವೆ ನಿಲ್ದಾಣದಲ್ಲಿ ಕೆಲಸ ಮಾಡುತಿದ್ದ ರಾಜೇಶ್ ತಿವಾರಿ ಫೇಸ್ ಬುಕ್ ನಲ್ಲಿ ಪರಿಚಯವಾಗಿದ್ದ ಈ ಸಂದರ್ಭ ಯುವತಿ ಕೆಲಸದ ಹುಡುಕಾಟದಲ್ಲಿ ಇರುವುದು ರಾಜೇಶ್ ತಿವಾರಿಗೆ ತಿಳಿಯಿತು ಇದನ್ನು ಅಸ್ತ್ರವಾಗಿ ಬಳಸಿಕೊಂಡ ತಿವಾರಿ ಯುವತಿಗೆ ಕೆಲಸ ಕೊಡುವ ನೆಪ ಹೇಳಿ ಭೋಪಾಲ್ ಗೆ ಬರುವಂತೆ ತಿಳಿಸಿದ್ದಾನೆ ಯುವತಿಯು ಕೆಲಸದ ಆಸೆಯಿಂದ ದೂರದ ಉತ್ತರ ಪ್ರದೇಶದಿಂದ ಭೋಪಾಲ್ ಗೆ ರೈಲಿನಲ್ಲಿ ಆಗಮಿಸಿದ್ದಾಳೆ. ಈ ವೇಳೆ ರಾಜೇಶ್ ತಿವಾರಿ ಹಾಗೂ ಆತನ ಗೆಳೆಯ ಇಬ್ಬರು ಸೇರಿ ರೈಲ್ವೆ ನಿಲ್ದಾಣದ ಕೊಟಡಿಗೆ ಕರೆದುಕೊಂಡು ಹೋಗಿದ್ದಾರೆ.

ಇದನ್ನೂ ಓದಿ :ಉಡುಪಿ ಶ್ರೀಕೃಷ್ಣ ಮಠ : ದೇಸೀತನವನ್ನು ಜನಪ್ರಿಯಗೊಳಿಸುವುದು ಪ್ರಮುಖ ಉದ್ದೇಶ

ಯುವತಿಗೆ ಕುಡಿಯಲು ತಂಪು ಪಾನೀಯವನ್ನು ನೀಡಿದ್ದು ಅದರಲ್ಲಿ ಇಬ್ಬರು ಅಧಿಕಾರಿಗಳು ಮತ್ತು ಬರುವ ಔಷಧಿಯನ್ನು ಹಾಕಿ ಅತ್ಯಾಚಾರ ಎಸಗಿದ್ದಾರೆ ಯುವತಿ ಎಚ್ಚರಗೊಂಡ ಬಳಿಕ ಘಟನೆಯ ಕುರಿತು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾಳೆ. ಕೂಡಲೇ ಎಚ್ಚೆತ್ತ ಪೊಲೀಸ್ ಅಧಿಕಾರಿಗಳು ರಾಜೇಶ್ ತಿವಾರಿ ಹಾಗೂ ಆತನ ಸ್ನೇಹಿತನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next