Advertisement

ಅಂದು ಖ್ಯಾತ ನಟಿ ಆಗಿದ್ದಾಕೆ ಭಿಕ್ಷೆ ಬೇಡಿ,ಕಳ್ಳತನ ಮಾಡಿ,ಆಸ್ಪತ್ರೆ ಸೇರುವ ಸ್ಥಿತಿಗೆ ಬಂದಳು!

06:33 PM Oct 26, 2023 | ಸುಹಾನ್ ಶೇಕ್ |

ಬಣ್ಣದ ಲೋಕದಲ್ಲಿ ಎಲ್ಲರೂ ಹೀರೋ, ಹೀರೋಯಿನ್‌ ಆಗಲು ಸಾಧ್ಯವಿಲ್ಲ. ನಟಿಸಲು ಅವಕಾಶ ಸಿಕ್ಕರೂ ಅವರೆಲ್ಲ ಸ್ಟಾರ್‌ ಆಗುತ್ತಾರೆ ಎನ್ನಲಾಗದು. ಆದರೆ ಒಂದೊಮ್ಮೆ ಸ್ಟಾರ್‌ ನಟಿ ಆಗಿದ್ದಾಕೆ, ಬೀದಿಗೆ ಬಿದ್ದು ಬದಕೇ ಬರ್ಬಾತ್‌ ಆಗಿದೆ.

Advertisement

ಮಿಥಾಲಿ ಶರ್ಮಾ. ಒಂದು ಕಾಲದಲ್ಲಿ ಭೋಜ್‌ ಪುರಿ ಸಿನಿಮಾರಂಗದಲ್ಲಿ ತನ್ನ ನಟನೆಯಿಂದ ಖ್ಯಾತರಾಗಿ, ನಿರ್ದೇಶಕ, ನಿರ್ಮಾಪಕರ ಮೆಚ್ಚಿನ ಆಯ್ಕೆ ಆಗಿದ್ದರು. ಆದರೆ ಬೇಡಿಕೆಯ ನಟಿಯಾಗಿದ್ದ ವೇಳೆಯೇ ಅವರ ಒಂದಷ್ಟು ಸಿನಿಮಾಗಳು ಬಾಕ್ಸ್‌ ಆಫೀಸ್‌ ನಲ್ಲಿ ಸೋಲಲು ಆರಂಭವಾಗುತ್ತದೆ. ಸತತ ಸೋಲಿನಿಂದ ನಟಿ ಮಿಥಾಲಿ ಅವರ ವೃತ್ತಿ ಜೀವನದ ಮೇಲೆ ಪರಿಣಾಮ ಬೀಳುತ್ತದೆ. ಇದೇ ಕಾಲದಲ್ಲಿ ಅವರು ಅವಕಾಶವನ್ನು ಹುಡುಕಿಕೊಂಡು ಮುಂಬಯಿಗೆ ಹೋಗುತ್ತಾರೆ.

ಆದರೆ ಇದೇ ಅವರ ಜೀವನಕ್ಕೆ ಮುಳ್ಳಾಗುತ್ತದೆ. ಮನೆಯವರ ವಿರೋಧದ ನಡುವೇ ಕನಸಿನ ನಗರಿ ಮುಂಬಯಿ ಹೋದ ಮಿಥಾಲಿ ಅವರು ಒಂದಷ್ಟು ದಿನ ಮಾಡೆಲಿಂಗ್‌ ಮಾಡಿಕೊಂಡು ದಿನದೂಡುತ್ತಾರೆ. ಒಂದಷ್ಟು ಸಿನಿಮಾಗಳಲ್ಲಿ ನಟಿಸಿ ವೃತ್ತಿ ಜೀವನವನ್ನು ಮುಂದುವರೆಸಲು ಯತ್ನಿಸುತ್ತಾರೆ.

ಮೂಲತಃ ದೆಹಲಿ ಮೂಲದ ಮಿಥಾಲಿ ಮನೆಯವರ ವಿರೋಧದ ನಡುವೆ ಮುಂಬಯಿಗೆ ಹೋಗಿ ಅವಕಾಶ ಸಿಗದೆ ಕಷ್ಟದ ದಿನಗಳನ್ನು ಎದುರಿಸುತ್ತಾರೆ. ಈ ಸಮಯದಲ್ಲಿ ಒಂದು ಹೊತ್ತಿನ ಊಟಕ್ಕೂ ಪರದಾಡುವ ಸ್ಥಿತಿ ಸ್ಟಾರ್‌ ನಟಿಯಾಗಿ ಭೋಜ್‌ ಪುರಿ ಇಂಡಸ್ಟ್ರಿಯಲ್ಲಿ ಮಿಂಚಿದ ಮಿಥಾಲಿ ಅವರಿಗೆ ಎದುರಾಗುತ್ತದೆ. ಈ ಸಮಯದಲ್ಲಿ ಮಿಥಾಲಿ ಅವರ ಮನೆಯವರು ಕೂಡ ಆಕೆಯನ್ನು ದೂರ ಮಾಡುತ್ತಾರೆ.

ದಿನ ಕಳೆದಂತೆ ಮಿಥಾಲಿ ಅವರಿಗೆ ನಟಿಸುವ ಅವಕಾಶವೂ ಸಿಗದ ಸ್ಥಿತಿಯೂ ಬರುತ್ತದೆ. ಇರಲು ಮನೆ, ಮನೆಯ ಬಾಡಿಗೆ ಹೀಗೆ ಕಷ್ಟದ ಸಮಯದಲ್ಲಿ ಅವರು ಕೊನೆಯದಾಗಿ ಆಯ್ದುಕೊಂಡದ್ದು ಮುಂಬೈನಲ್ಲಿರುವ ಲೋಖಂಡವಾಲಾ ರಸ್ತೆಯಲ್ಲಿ ಮಿಥಾಲಿ ಭಿಕ್ಷೆ ಬೇಡುವಂಥ ಪರಿಸ್ಥಿತಿ ಬರುತ್ತದೆ. ಮಾನಸಿಕವಾಗಿ ಕುಗ್ಗಿ, ಖಿನ್ನತೆಗೆ ಒಳಗಾಗಿದ್ದ ಮಿಥಾಲಿ ಅವರು ತಾನೊಬ್ಬ ಸ್ಟಾರ್‌ ನಟಿ ಎನ್ನುವುದನ್ನು ಕೂಡ ಜನ ಗುರುತಿಸಲು ಆಗದಿರುವ ಮಟ್ಟಕ್ಕೆ ಜನಪ್ರಿಯತೆಯನ್ನು ಕಳೆದುಕೊಳ್ಳುತ್ತಾರೆ.

Advertisement

ಭಿಕ್ಷೆ ಬೇಡುವ ವೇಳೆ, ಹೆಚ್ಚಿನ ಹಣಕ್ಕಾಗಿ ಅವರು ಕಳ್ಳತನಕ್ಕಿಳಿಯುತ್ತಾರೆ. ಇದೇ ಪ್ರಕರಣದಲ್ಲಿ ಕಳ್ಳತನ ಮಾಡಿದ ಆರೋಪದ ಮೇಲೆ ಮಿಥಾಲಿ ಅವರನ್ನು ಈ ಹಿಂದೆ ಪೊಲೀಸರು ಬಂಧಿಸಲು ಮುಂದಾಗುತ್ತಾರೆ. ಆದರೆ ಪೊಲೀಸರಿಂದ ತಪ್ಪಿಸಿಕೊಳ್ಳುವ ವೇಳೆ ಆಕೆ ಹಲ್ಲೆ ನಡೆಸಿ ಪರಾರಿ ಆಗಲು ಯತ್ನಿಸಿದ್ದರು.

ಬಳಿಕ ಪೊಲೀಸರು ಖಿನ್ನತೆ ಮತ್ತು ಇತರ ಮಾನಸಿಕ ಆರೋಗ್ಯ ಸಮಸ್ಯೆಗಳೊಂದಿಗೆ ಹೋರಾಡುತ್ತಿದ್ದ ಮಿಥಾಲಿಯನ್ನು ನಂತರ ಥಾಣೆಯಲ್ಲಿರುವ ನಾಗರಿಕ ಮಾನಸಿಕ ಕೇಂದ್ರಕ್ಕೆ ದಾಖಲಿಸಿದ್ದರು. ಆದರೆ ಇಂದು ಮಿಥಾಲಿ ಎಲ್ಲಿದ್ದಾರೆ ಎನ್ನುವುದರ ಬಗ್ಗೆ ಯಾವ ಮಾಹಿತಿಯೂ ಇಲ್ಲ. ಅವರು ಮಾನಸಿಕ ಕೇಂದ್ರದಲ್ಲಿದ್ದಾರಾ ಅಥವಾ ಇಲ್ವೋ? ಎನ್ನುವುದರ ಬಗ್ಗೆ ಅಷ್ಟಾಗಿ ಮಾಹಿತಿ ಇಲ್ಲ ಎಂಬುದು ಪೊಲೀಸರ ಹೇಳಿಕೆಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next