Advertisement

ನಿರ್ಮಾಣ್‌ ಶೆಲ್ಟರ್ಸ್‌ನಿಂದ ಭೀಮ ನಮನ

12:12 PM Jan 30, 2018 | Team Udayavani |

ಬೆಂಗಳೂರು: ಬನ್ನೇರುಘಟ್ಟ ಸಮೀಪದ ನಿಸರ್ಗ ಬಡಾವಣೆಯ ಪುರಂದರ ಮಂಟಪದಲ್ಲಿ ನಿರ್ಮಾಣ್‌ ಶೆಲ್ಟರ್ಸ್‌ ಪ್ರೈ.ಲಿ., ಇತೀ¤ಚೆಗೆ ಖ್ಯಾತ ಸಂಗೀತ ವಿದ್ವಾಂಸ ಭಾರತರತ್ನ ದಿ. ಪಂಡಿತ್‌ ಭೀಮಸೇನ ಜೋಶಿಯವರ ಸ್ಮರಣಾರ್ಥ 7ನೇ ವರ್ಷದ “ಭೀಮ ನಮನ’ ಸಾಂಸ್ಕೃತಿಕ ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು.

Advertisement

ನಿರ್ಮಾಣ್‌ ಸಮೂಹ ಸಂಸ್ಥೆಗಳ ಸಂಸ್ಥಾಪಕ ಹಾಗೂ ವಿಎಲ್‌ಎನ್‌ ನಿರ್ಮಾಣ್‌ ಪುರಂದರ ಪ್ರತಿಷ್ಠಾನದ ವ್ಯವಸ್ಥಾಪಕ ವಿಶ್ವಸ್ಥ ವಿ. ಲಕೀನಾರಾಯನ್‌ ಅವರು ದಿ. ಭೀಮಸೇನ ಜೋಶಿಯವರ ಭಾವಚಿತ್ರಕ್ಕೆ ಪುಷ್ಪಗಳ ಸಮರ್ಪಣೆ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಹಾಗೇ ಭೀಮಸೇನ ಜೋಶಿ ಅವರ ಸಂಗೀತ ಸಾಧನೆ, ಚಿಂತನೆ ಮತ್ತು ಜೀವನ ಚರಿತ್ರೆ ಕುರಿತು ಮಾತನಾಡಿದರು. ನಂತರ ವಿದ್ವಾನ್‌ ಜಯತೀರ್ಥ ಮೇವುಂಡಿ ಮತ್ತು ತಂಡದವರು ದಾಸವಾಣಿ ಹಾಗೂ ಸಂತವಾಣಿ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು.

Advertisement

Udayavani is now on Telegram. Click here to join our channel and stay updated with the latest news.

Next