Advertisement

Moodabidri ಪರಿಸರ ಸ್ನೇಹಿ ದೀಪಾವಳಿ ಆಚರಿಸಲು ಭಟ್ಟಾರಕರ ಕರೆ

11:47 PM Nov 11, 2023 | Team Udayavani |

ಮೂಡುಬಿದಿರೆ: ಕೇಂದ್ರ ಸರಕಾರವು ದೀಪಾವಳಿ ಹಬ್ಬದ ಸಂದರ್ಭ ಹಮ್ಮಿಕೊಂಡಿರುವ ವಿಶೇಷ ಜನಾಭಿಪ್ರಾಯ ಅಭಿಯಾನದಂಗವಾಗಿ ಮೂಡು ಬಿದಿರೆಯ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಯವರು ಪರಿಸರ ಸ್ನೇಹಿ ದೀಪಾವಳಿ ಆಚರಿಸಲು ಕರೆ ನೀಡಿದ್ದಾರೆ.

Advertisement

ಶಬ್ದ ಮಾಲಿನ್ಯ ಪರಿಸರ ಮಾಲಿನ್ಯಕ್ಕೆ ಕಾರಣವಾಗುವ ಅಪಾಯಕಾರಿ ಪಟಾಕಿ ಸಿಡಿಸದೆ ನಮ್ಮ ಹಬ್ಬ ಇನ್ನೊಬ್ಬರಿಗೆ ಹಾನಿಯಾಗದಂತೆ ಆಚರಿಸೋಣ. ಪ್ಲಾಸ್ಟಿಕ್‌ ಮುಕ್ತ ಅಭಿಯಾನಕ್ಕೆ ಸಾಧ್ಯವಾದಷ್ಟು ಸಹಕರಿಸೋಣ.

ಸಾಧ್ಯವಾದಷ್ಟು ದೇಶೀಯ ವಸ್ತು ಖರೀದಿಸಿ ಸ್ವಾವಲಂಬನೆಯ ದೇಶ ಕಟ್ಟಲು ಸರ್ವರೂ ಕೈಜೋಡಿಸೋಣ ಎಂದು ಅವರು ಕರೆ ನೀಡಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next