Advertisement

ಕೇರಳದ ಕೊಲ್ಲಂನಿಂದ ಕಾಂಗ್ರೆಸ್‌ನ ಭಾರತ್‌ ಯಾತ್ರಿಗಳ ನಡಿಗೆ ಶುರು

11:43 PM Sep 16, 2022 | Team Udayavani |

ಕೊಲ್ಲಂ: ಒಂದು ದಿನದ ವಿರಾಮದ ಬಳಿಕ ಶುಕ್ರವಾರ ಕಾಂಗ್ರೆಸ್‌ನ ಭಾರತ್‌ ಜೋಡೋ ಯಾತ್ರೆ ಪುನರಾರಂಭ ಗೊಂಡಿದ್ದು, ಕೇರಳದ ಕೊಲ್ಲಂನಿಂದ ಭಾರತ್‌ ಯಾತ್ರಿಗಳು ಸಂಚಾರ ಮುಂದುವರಿಸಿದ್ದಾರೆ.

Advertisement

ಈ ವೇಳೆ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರು ಗೇರು ಕಾರ್ಮಿಕರು ಸೇರಿದಂತೆ ವಿವಿಧ ಕ್ಷೇತ್ರಗಳ ಕಾರ್ಮಿಕರು, ಯುವಕ ರೊಂದಿಗೆ ಸಂವಾದವನ್ನೂ ನಡೆಸಿದ್ದಾರೆ.

ಇದೇ ವೇಳೆ ಯಾತ್ರೆಗೆ ದೇಣಿಗೆ ಸಂಗ್ರಹದ ನೆಪದಲ್ಲಿ ಸ್ಥಳೀಯ ತರಕಾರಿ ವ್ಯಾಪಾರಿಗೆ ಕೇರಳದ ಕಾಂಗ್ರೆಸ್‌ ಕಾರ್ಯಕರ್ತರು ಬೆದರಿಕೆ ಹಾಕಿದ್ದಾರೆ.

ಈ ಹಿನ್ನೆಲೆಯಲ್ಲಿ ಮೂವರು ಕಾರ್ಯಕರ್ತರನ್ನು ಕಾಂಗ್ರೆಸ್‌ ಅಮಾನತು ಮಾಡಿದೆ.

Advertisement

Udayavani is now on Telegram. Click here to join our channel and stay updated with the latest news.

Next