Advertisement

ಭಾರತ್‌ ಬ್ಯಾಂಕ್‌ ಸ್ಟಾಫ್‌ ವೆಲ್ಫೇರ್‌ ಕ್ಲಬ್‌:ಸ್ನೇಹ ಸಮ್ಮಿಲನ

02:53 PM Jan 19, 2018 | Team Udayavani |

ಮುಂಬಯಿ: ಬಿಲ್ಲವರ ಅಸೋಸಿಯೇಶನ್‌ ಮುಂಬಯಿ ಸಂಚಾಲಿತ ಭಾರತ್‌ ಕೋ- ಆಪರೇಟಿವ್‌ ಬ್ಯಾಂಕ್‌ ಮುಂಬಯಿ ಇದರ ಬೆಂಗಳೂರು ಸ್ಟಾಫ್‌ ವೆಲ್ಫೇರ್‌  ಕ್ಲಬ್‌ ವತಿಯಿಂದ ಜ. 13 ಮತ್ತು ಜ. 14ರಂದು ವಾರ್ಷಿಕ ಸ್ನೇಹ ಸಮ್ಮಿಲನ ಮತ್ತು ಕ್ರೀಡೋತ್ಸವವನ್ನು ಆಯೋಜಿಸಲಾಗಿತ್ತು.

Advertisement

ಸಿಲಿಕಾನ್‌ ಸಿಟಿಯ ಗೇಟ್‌ವೇ ರೆಸೋರ್ಟ್‌ನಲ್ಲಿ ನಡೆದ ಈ ಕಾರ್ಯಕ್ರಮವು  ಸ್ಟಾಫ್‌ ವೆಲ್ಫೆàರ್‌ ಕ್ಲಬ್‌ ಸದಸ್ಯರಾದ ಚೇತನ್‌ ಕುಮಾರ್‌, ನಾಗರಾಜ್‌ ಸುವರ್ಣ,  ಚೇತಲಿ ಸುವರ್ಣ ಇವರ ಮುಂದಾಳತ್ವದಲ್ಲಿ ಹಾಗೂ ಹಿರಿಯ ಪ್ರಬಂಧಕರಾದ ಸತೀಶ್‌ ಪಿ. ಪೂಜಾರಿ ಅವರ ಅಧ್ಯಕ್ಷತೆಯಲ್ಲಿ ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ  ನಡೆಯಿತು. ಇದೇ ಸಂದರ್ಭದಲ್ಲಿ ನಡೆದ ಸಭಾ ಕಾರ್ಯಕ್ರಮದ ವೇದಿಕೆಯಲ್ಲಿ  ಬೆಂಗಳೂರಿನ ಸುರೇಖಾ ಡಿ. ಪೂಜಾರಿ, ನಾಗರಾಜ್‌ ಸುವರ್ಣ, ರವೀಂದ್ರ ಕುಂದರ್‌, ಗೋಪಾಲ್‌ ಪೂಜಾರಿ,  ಕಿರಣ್‌ ಬಿ. ಹಾಗೂ ಶಾಖಾ  ಪ್ರಮುಖರಾದ ಎವರೆಲಾ ಅಶಿಂ ಅವರು ಉಪಸ್ಥಿತರಿದ್ದರು.

ಪ್ರಾರಂಭದಲ್ಲಿ ಬೇಬಿ ಲಾಶಿಯಾ ನಾಗರಾಜ್‌ ಅವರು  ಪ್ರಾರ್ಥನೆಗೈದರು. ವೀಣಾ ಕಿರಣ್‌ ಕುಮಾರ್‌ ಅವರು ಕಾರ್ಯಕ್ರಮ ನಿರ್ವಹಿಸಿದರು. ಸಾಂಸ್ಕೃತಿಕ ಕಾರ್ಯಕ್ರಮವಾಗಿ ಪುಟಾಣಿಗಳಿಂನ ನೃತ್ಯ ವೈವಿಧ್ಯ, ಕ್ರಿಕೆಟ್‌, ತ್ರೋಬಾಲ್‌ ಇನ್ನಿತರ ವಿವಿಧ ಕ್ರೀಡೆಗಳನ್ನು ಆಯೋಜಿಸಲಾಗಿತ್ತು.

ಅಧ್ಯಕ್ಷತೆ ವಹಿಸಿದ್ದ ಸತೀಶ್‌ ಪೂಜಾರಿ ಅವರು ಮಾತನಾಡಿ, ಭಾರತ್‌ ಬ್ಯಾಂಕ್‌ ನಮ್ಮಗೆಲ್ಲ ಒಂದು ರೀತಿಯಲ್ಲಿ  ಕಲ್ಪವೃಕ್ಷ ಇದ್ದಂತೆ. ನಾವೆಲ್ಲರೂ ಶ್ರಮಪಟ್ಟು ದುಡಿಯಬೇಕು.  ಇದರಿಂದ ನಮ್ಮ ಪ್ರಗತಿ ಖಂಡಿತಾ ಆಗುತ್ತದೆ.  ನಮ್ಮ ಬ್ಯಾಂಕಿನ ನಿರ್ದೇಶಕ  ಮಂಡಳಿಗೆ ನಾವೆಲ್ಲರೂ ಚಿರಋಣಿಗಳು ಎಂದು ನುಡಿದು ಎಲ್ಲರಿಗೂ ಶುಭಹಾರೈಸಿದರು. ಸತೀಶ್‌ ಎಲ್‌. ಸುವರ್ಣ, ಭಾಸ್ಕರ್‌ ಸರಪಾಡಿ, ಸದಾನಂದ ಕಾರ್ಕಳ, ಆಕಾಶ್‌ ಭಾಸ್ಕರ್‌ ಪೂಜಾರಿ,  ಚೇತನ್‌ ಕುಮಾರ್‌ ಹಾಗೂ  ಎಲ್ಲ ಸಿಬಂದಿ ವರ್ಗದವರು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.

ಕಾರ್ಯಕ್ರಮದಲ್ಲಿ ಪ್ರತೀ ವರ್ಷ ಸಹಕರಿಸುತ್ತಿರುವ  ವಜೀರ ಕುಮಾರ್‌ ಪಿ. ಜೈನ್‌ ಅವರನ್ನು ಸಮ್ಮಾನಿಸಲಾಯಿತು. ಕೊನೆಗೆ ಗೋಪಾಲ್‌  ಪೂಜಾರಿ ಅವರು ವಂದಿಸಿದರು. ಸದಸ್ಯ ಬಾಂಧವರು, ಅವರ ಪರಿವಾರದವರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next