Advertisement

ಭಾರತ್‌ ಬ್ಯಾಂಕ್‌: ಮುಖ್ಯ ಕಚೇರಿಯಲ್ಲಿ 72ನೇ ಸ್ವಾತಂತ್ರ್ಯ ದಿನ 

04:53 PM Aug 21, 2018 | Team Udayavani |

ಮುಂಬಯಿ: ಭಾರತ್‌ ಕೋ. ಆಪರೇಟಿವ್‌ ಬ್ಯಾಂಕ್‌ ಮುಂಬಯಿ ಲಿಮಿಟೆಡ್‌ ಇದರ ವತಿಯಿಂದ 72 ನೇ ಸ್ವಾತಂತ್ರೊÂàತ್ಸವ ಸಂಭ್ರಮವು ಆ. 15 ರಂದು ಗೋರೆಗಾಂವ್‌ ಪೂರ್ವದ ಭಾರತ್‌ ಬ್ಯಾಂಕ್‌ನ ಕೇಂದ್ರ ಕಾರ್ಯಾಲಯದ ಆವರಣದಲ್ಲಿ ಜರಗಿತು.

Advertisement

ಭಾರತ್‌ ಬ್ಯಾಂಕಿನ ಕಾರ್ಯಾಧ್ಯಕ್ಷ ಜಯ ಸಿ. ಸುವರ್ಣ ಅವರು ಧ್ವಜಾರೋಹಣಗೈದು ರಾಷ್ಟ್ರ ನಮನ ಸಲ್ಲಿಸಿದರು. ಇದೇ ಸಂದರ್ಭದಲ್ಲಿ ಆ. 21 ರಂದು ನಡೆಯಲಿರುವ ಭಾರತ್‌ ಬ್ಯಾಂಕಿನ ನಲ್ವತ್ತನೇ ವಾರ್ಷಿಕ ಸಂಸ್ಥಾಪನೆ ದಿನಾಚರಣೆಯ ಪೂರ್ವಭಾವಿಯಾಗಿ ಸಸಿನೆಟ್ಟು ಹಸಿರು ಕ್ರಾಂತಿ ಹಾಗೂ ಆರ್ಥಿಕ ಪ್ರಗತಿಗೆ ಚಾಲನೆ ನೀಡಿದರು.

ಸಮಾರಂಭದಲ್ಲಿ ಭಾರತ್‌ ಬ್ಯಾಂಕಿನ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಹಾಗೂ ಕಾರ್ಯನಿರ್ವಾಹಕ ನಿರ್ದೇಶಕ ಸಿ. ಆರ್‌. ಮುಲ್ಕಿ, ಮಹಾಪ್ರಬಂಧಕ ವಿದ್ಯಾನಂದ ಎಸ್‌. ಕರ್ಕೇರ, ದಿನೇಶ್‌ ಬಿ. ಸಾಲ್ಯಾನ್‌, ಉಪ ಮಹಾಪ್ರಬಂಧಕ ಸತೀಶ್‌ ಎಂ. ಬಂಗೇರ, ಪ್ರಭಾಕರ ಪೂಜಾರಿ, ಭಾರತ್‌ ಬ್ಯಾಂಕ್‌ ಎಂಪ್ಲಾಯೀಸ್‌ ಯೂನಿಯನ್‌ ಅಧ್ಯಕ್ಷ ರಮೇಶ್‌ ಟಿ. ಪೂಜಾರಿ, ಆಫೀಸರ್ ಅಸೋಸಿಯೇಶನ್‌ ಅಧ್ಯಕ್ಷ ಕಿರಣ್‌ ಕುಮಾರ್‌ ಬಿ. ಅಮೀನ್‌, ಸ್ಟಾಫ್‌ ವೆಲ್ಫೆàರ್‌ ಕ್ಲಬ್‌ನ ಕಾರ್ಯದರ್ಶಿ ಮೋಕ್ಷಾ ಕುಂದರ್‌, ನಗರ ಹಾಗೂ ಉಪನಗರಗಳ ಶಾಖೆಗಳ ಸಿಬಂದಿಗಳು ಹಾಗೂ ಮಾಜಿ ಮಹಾಪ್ರಬಂಧಕಿ ಶೋಭಾ ದಯಾನಂದ್‌ ಉಪಸ್ಥಿತರಿದ್ದರು. 

ಚಿತ್ರ-ವರದಿ:ರಮೇಶ್‌ ಅಮೀನ್‌

Advertisement

Udayavani is now on Telegram. Click here to join our channel and stay updated with the latest news.

Next