Advertisement

ಬಿಕ್ಕಟ್ಟಿಗೊಳಗಾದ ದ್ವೀಪವಾಸಿಗಳಿಗೆ ಈ ಗೆಲುವು ಅರ್ಪಣೆ: ರಾಜಪಕ್ಸ

11:11 PM Sep 12, 2022 | Team Udayavani |

ದುಬಾೖ: ತೀವ್ರ ಆರ್ಥಿಕ ಬಿಕ್ಕಟ್ಟಿಗೆ ಸಿಲುಕಿರುವ ದ್ವೀಪವಾಸಿಗಳಿಗೆ ಈ ಏಷ್ಯಾ ಕಪ್‌ ಗೆಲುವನ್ನು ಅರ್ಪಿ ಸುತ್ತಿದ್ದೇವೆ ಎಂಬುದಾಗಿ ಶ್ರೀಲಂಕಾದ ಗೆಲುವಿನ ಹೀರೋ ಭನುಕ ರಾಜಪಕ್ಸ ಹೇಳಿದ್ದಾರೆ.

Advertisement

“ಎರಡು ದಶಕಗಳ ಹಿಂದಿನ ನಮ್ಮ ತಂಡದ ಸಾಮರ್ಥ್ಯ ಹೇಗಿತ್ತು ಎಂಬು ದನ್ನು ಎಲ್ಲರೂ ಬಲ್ಲರು. ಇಂಥದೊಂದು ಆಕ್ರಮಣಕಾರಿ ರಣನೀತಿಯ ಮೂಲಕ ನಮ್ಮ ಪರಾಕ್ರಮವನ್ನು ಮತ್ತೂಮ್ಮೆ ಕ್ರಿಕೆಟ್‌ ಜಗತ್ತಿನ ಮುಂದೆ ಅನಾವರಣ ಗೊಳಿಸಬೇಕಿತ್ತು. ಇಂದು ಇದು ಸಾಧ್ಯ ವಾಗಿದೆ. ಕಳೆದ ಕೆಲವು ತಿಂಗಳಿಂದ ತೀವ್ರ ಆರ್ಥಿಕ ಬಿಕ್ಕಟ್ಟಿಗೆ ಸಿಲುಕಿರುವ ಶ್ರೀಲಂಕಾ ನಿವಾಸಿಗಳಿಗೆ ಈ ಗೆಲುವು ಅರ್ಪಣೆ’ ಎಂಬುದಾಗಿ ರಾಜಪಕ್ಸ ಹೇಳಿದರು.

“ಮುಂದಿನ ಟಿ20 ವಿಶ್ವಕಪ್‌ ಪಂದ್ಯಾವಳಿಗೆ ಈ ಗೆಲುವು ದೊಡ್ಡ ಸ್ಫೂರ್ತಿ. ಆದರೆ ಶ್ರೀಲಂಕಾ ಜನತೆ ಇದನ್ನು ಸಂಭ್ರಮಿಸುವ ಸ್ಥಿತಿಯಲ್ಲಿಲ್ಲ. ಇದೊಂದು ಸಂದಿಗ್ಧ ಸಮಯ. ಆದರೆ ಇವರೆಲ್ಲರ ಮೊಗದಲ್ಲಿ ತುಸು ನಗೆ ಮೂಡಿಸಿದ್ದೇವೆ ಎಂಬ ಸಮಾಧಾನ ನಮ್ಮದು. ಇಂಥದೊಂದು ಗೆಲುವನ್ನು ನಮ್ಮ ದೇಶ ಎಂದಿನಿಂದಲೋ ಎದುರು ನೋಡುತ್ತಿತ್ತು…’ ಎಂದು ರಾಜಪಕ್ಸ ಹೇಳಿದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next