Advertisement

ಸೀಲ್‌ಡೌನ್‌: ನ್ಯಾಯಾಲಯಕ್ಕೆ ವಕೀಲರ ಪ್ರವೇಶ ನಿರ್ಬಂಧ

01:29 PM Jun 13, 2020 | Naveen |

ಭದ್ರಾವತಿ: ಗರ್ಭಿಣಿಯಲ್ಲಿ ಕೋವಿಡ್‌ ಪಾಸಿಟಿವ್‌ ಕಾಣಿಸಿ ಕೊಂಡ ಕಾರಣ ಗುರುವಾರ ಇಲ್ಲಿನ ರಂಗಪ್ಪ ವೃತ್ತದಿಂದ ಚೆನ್ನಗಿರಿ ರಸ್ತೆಯ ಹೊಳೆಹೊನ್ನೂರು ಕ್ರಾಸ್‌ ವರಗಿನ ಅಂಗಡಿ, ಮನೆ ಎಲ್ಲವನ್ನೂ ಸೀಲ್‌ ಡೌನ್‌ ಮಾಡಲಾಗಿದೆ.

Advertisement

ಈ ಹಿನ್ನೆಲೆಯಲ್ಲಿ ರಂಗಪ್ಪ ವೃತ್ತಕ್ಕೆ ಸಮೀಪದ ನ್ಯಾಯಾಲಯ ಸಂಕೀರ್ಣದ ಆವರಣದೊಳಗೆ ಶುಕ್ರವಾರ ನ್ಯಾಯವಾದಿಗಳ ಪ್ರವೇಶಕ್ಕೆ ನಿರ್ಬಂಧ ವಿಧಿಸಲಾಗಿತ್ತು. ಹಾಗಾಗಿ, ನ್ಯಾಯವಾದಿಗಳು ನ್ಯಾಯಾಲಯದ ಗೇಟಿನ ಬಳಿ ಕೆಲಕಾಲ ನಿಂತು ಹಿಂದಿರುಗಿದರು. ಇದುವರೆಗೆ ಕಕ್ಷಿದಾರರ ಪ್ರವೇಶಕ್ಕೆ ಮಾತ್ರ ವಿಧಿಸಲಾಗಿದ್ದ ನಿರ್ಬಂಧ ಈಗ ವಕೀಲರಿಗೂ ವಿಸ್ತರಿಸಿದ ಕಾರಣ ನ್ಯಾಯಾಲಯದ ಆವರಣ ಭಣಗುಡುತ್ತಿತ್ತು. ನ್ಯಾಯಾಧೀಶರು ಮತ್ತು ನ್ಯಾಯಲಯದ ಸಿಬ್ಬಂದಿಗೆ ಮಾತ್ರ ಯಾವುದೇ ನಿರ್ಬಂಧವಿರಲಿಲ್ಲ. ಹಾಗಾಗಿ, ಅವರು ಎಂದಿನಂತೆ ನ್ಯಾಯಾಲಯಕ್ಕೆ ತೆರಳಿ ಕಾರ್ಯನಿರ್ವಹಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next