Advertisement

Bengaluru-Mysuru ಎಕ್ಸ್‌ಪ್ರೆಸ್‌ ವೇ : ತಗ್ಗಿದ ಅಪಘಾತ ಪ್ರಮಾಣ

02:56 PM Sep 04, 2024 | Team Udayavani |

ರಾಮನಗರ : ಸಾವಿನ ಹೆದ್ದಾರಿ ಎಂಬ ಕಳಂಕ‌ಪಡೆದಿದ್ದ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ ವೇ ನಲ್ಲಿ ಅಪಘಾತ ಪ್ರಮಾಣ ತಗ್ಗಿದೆ.

Advertisement

2023ರಲ್ಲಿ ಆಗಸ್ಟ್ ತಿಂಗಳ ವರಗೆ 147 ಮಂದಿ ಹೆದ್ದಾರಿಯಲ್ಲಿ ಅಪಘಾತದಲ್ಲಿ ಸಾವಿಗೀಡಾಗಿದ್ದರು. ಈ ವರ್ಷ ಇದುವರೆಗೆ 50 ಮಂದಿ ಸಾವಿಗೀಡಾಗಿದ್ದಾರೆ.

ಫೆಬ್ರವರಿ ತಿಂಗಳಿಂದ ಸಾವಿನ ಪ್ರಮಾಣ ಸಿಂಗಲ್ ಡಿಜಿಟ್ ಗೆ ಇಳಿದಿದ್ದು, ಈ ಬಗ್ಗೆ ಸಂಚಾರ ಮತ್ತು ರಸ್ತೆ ಸುರಕ್ಷತಾ ವಿಭಾಗದ ಎಡಿಜಿಪಿ ಅಲೋಕ್ ಕುಮಾರ್ ಎಕ್ಸ್ ಖಾತೆಯಲ್ಲಿ ಟ್ವೀಟ್ ಮಾಡಿ ಮಾಹಿತಿ ನೀಡಿದ್ದಾರೆ.

’15 ನಿಮಿಷ ಪ್ರಯಾಣದ ಸಮಯ ಹೆಚ್ಚಿಸಿ ದರೆ ಅಮೂಲ್ಯ ಜೀವ ಉಳಿಯುತ್ತದೆ. ಈ ವರ್ಷ 97 ಅಮೂಲ್ಯ ಜೀವ ಉಳಿದಿದೆ’ ಎಂದು ಅಲೋಕ್ ಕುಮಾರ್ ಪೋಸ್ಟ್ ನಲ್ಲಿ ತಿಳಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next