Advertisement

Bengaluru: ಫೋಟೋ ಕ್ಲಿಕ್ಕಿಸುವಾಗ ಅಡ್ಡ ಬಂದ ಎಚ್‌ಎಎಲ್‌ ನೌಕರನ ಮೇಲೆ ಹಲ್ಲೆ

12:31 PM Oct 13, 2024 | Team Udayavani |

ಬೆಂಗಳೂರು: ಫೋಟೋ ತೆಗೆಯುವಾಗ ಅಡ್ಡ ಬಂದ ಎಚ್‌ಎಎಲ್‌ ಉದ್ಯೋಗಿಗೆ ಹಲ್ಲೆ ಮಾಡಿ ರುವ ಆರೋಪಿ ವಿರುದ್ಧ ಕಬ್ಬನ್‌ಪಾರ್ಕ್‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

ಎಚ್‌ಎಎಲ್‌ ಡಿಫೆನ್ಸ್‌ ವಿಭಾಗದ ಟೆಕ್ನಿಷಿಯನ್‌ ರವಿ ಕಿರಣ್‌ ಹಲ್ಲೆಗೊಳ ಗಾದವರು. ಸೆ.29 ರಂದು ಮಧ್ಯಾಹ್ನ ರವಿ ಕಿರಣ್‌ ಕಬ್ಬನ್‌

ಪಾರ್ಕ್‌ಗೆ ಬಂದಿ ದ್ದರು. ಉತ್ತರ ಭಾರತದ ವ್ಯಕ್ತಿಯೊಬ್ಬ ಫೋಟೋ ತೆಗೆ ಯುವಾಗ ಅಡ್ಡವಾಗಿ ರವಿಕಿರಣ್‌ ಹೋಗಿದ್ದರು. ಫೋಟೋ ತೆಗೆಯುವಾಗ ಅಡ್ಡ ಬಂದ ರವಿಕಿರಣ್‌ ಅವರನ್ನು ಉತ್ತರ ಭಾರತದ ವ್ಯಕ್ತಿ ಪ್ರಶ್ನಿಸಿ ನಿಂದಿಸಿದ್ದ. ಸಾಲದಕ್ಕೆ ಪಾರ್ಕ್‌ ನಿಮ್ಮ ಅಪ್ಪಂದ ಎಂದು ಅವಾಚ್ಯ ಶಬ್ದಗಳಿಂದ ನಿಂದಿಸಿ ರವಿಕಿರಣ್‌ ಮೇಲೆ ಹಲ್ಲೆ ನಡೆಸಿದ್ದ. ಇತ್ತ ರವಿಕಿರಣ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಕಬ್ಬನ್‌ಪಾರ್ಕ್‌ ಠಾಣೆಗೆ ದೂರು ನೀಡಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next