Advertisement

Bengaluru: ಯುವತಿಗೆ ನಿಂದನೆ: ಪೇಂಟಿಂಗ್‌ ಕಾರ್ಖಾನೆ ಕಾರ್ಮಿಕನ ಹತ್ಯೆ

12:10 PM Aug 23, 2024 | Team Udayavani |

ಬೆಂಗಳೂರು: ಯುವತಿಯ ವಿಚಾರಕ್ಕೆ ಪೇಟಿಂಗ್‌ ಕಾರ್ಖಾನೆ ಕಾರ್ಮಿಕನನ್ನು ಚಾಕುವಿನಿಂದ ಇರಿದು ಕೊಲೆಗೈದಿರುವ ಘಟನೆ ಕಾಟನ್‌ಪೇಟೆ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

Advertisement

ಕೆ.ಪಿ ಅಗ್ರಹಾರದ ಮಾರ್ಕೇಂಡೇಶ್ವರ ನಗರ ನಿವಾಸಿ ಶರತ್‌ ಕುಮಾರ್‌ (30) ಕೊಲೆಯಾದವ.

ನಗರದಲ್ಲಿ ಪೇಟಿಂಗ್‌ ಕಾರ್ಖಾನೆಯಲ್ಲಿ ಕೆಲಸ ಮಾಡುವ ಶರತ್‌ ಕುಮಾರ್‌, ಅಂಜನಪ್ಪ ಗಾರ್ಡನ್‌ ನಲ್ಲಿ ಪರಿಚಯಸ್ಥರೊಬ್ಬರು ಮೃತಪಟ್ಟ ಹಿನ್ನೆಲೆಯಲ್ಲಿ ಅವರ ಅಂತಿಮ ದರ್ಶನ ಪಡೆಯಲು ಮುಂಜಾನೆ 6.30ರ ಸುಮಾರಿಗೆ ಬಂದಿದ್ದಾನೆ. ಅಂತಿಮ ದರ್ಶನ ಪಡೆದು, ಸಮೀಪದಲ್ಲಿರುವ ಅಣ್ಣ ಪ್ರಭುವಿನ ಮನೆಗೆ ಹೋಗಿದ್ದಾನೆ. ಆ ನಂತರ ಕೆ.ಪಿ.ಅಗ್ರಹಾರದ ಮನೆಗೆ ಹೋಗುವಾಗ ನಾಲ್ಕೈದು ಮಂದಿ ಶರತ್‌ ಜತೆ ಜಗಳ ಮಾಡಿದ್ದಾರೆ.

ಅದು ವಿಕೋಪಕ್ಕೆ ಹೋದಾಗ ಕೋಪಗೊಂಡ ಆರೋಪಿ ಗಳು, ಶರತ್‌ನ ಹೊಟ್ಟೆಯ ಎಡ ಭಾಗಕ್ಕೆ ಚುಚ್ಚಿದ್ದಾರೆ. ಕೂಡಲೇ ಆತನನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖ ಲಿಸಲಾಗಿತ್ತು. ಆದರೆ, ಚಿಕಿತ್ಸೆ ಫ‌ಲಕಾರಿಯಾಗದೇ ಶರತ್‌ ಕುಮಾರ್‌ ಮೃತಪಟಿದ್ದಾನೆ. ಮೃತನ ಪತ್ನಿ ಆನಂದಿ ನೀಡಿದ ದೂರಿನ ಮೇರೆಗೆ ಕೊಲೆ ಪ್ರಕರಣ ದಾಖಲಿಸಿಕೊಂಡು, ಆರೋಪಿಗಳಿಗಾಗಿ ಪತ್ತೆ ಕಾರ್ಯ ನಡೆಯುತ್ತಿದೆ ಎಂದು ಪೊಲೀಸರು ಹೇಳಿದರು.

ಮೃತನ ಅಂತಿಮ ದರ್ಶನ ಸಂದರ್ಭ ದಲ್ಲಿ ಶರತ್‌ ಯುವತಿಯೊಬ್ಬರಿಗೆ ನಿಂದಿಸಿದ್ದ ಎಂದು ಹೇಳಲಾಗಿದೆ. ಅದೇ ವಿಚಾರಕ್ಕೆ ಕೋಪಗೊಂಡಿರುವ ಯುವತಿ ಕಡೆಯವರು, ಶರತ್‌ನನ್ನು ಕೊಲೆಗೈದಿದ್ದಾರೆ ಎಂಬುದು ಗೊತ್ತಾಗಿದೆ. ಆರೋಪಿಗಳ ಸುಳಿವು ಸಿಕ್ಕಿದ್ದು, ಸದ್ಯದಲ್ಲೇ ಬಂಧಿಸಲಾಗುತ್ತದೆ ಎಂದು ಪೊಲೀಸರು ಹೇಳಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next