Advertisement

Bengaluru: ಬಿಎಂಟಿಸಿ ಬಸ್‌ ಡಿಕ್ಕಿ: ಬಾರ್‌ ಸಪ್ಲೆಯರ್‌ ದುರ್ಮರಣ

10:52 AM Sep 13, 2024 | Team Udayavani |

ಬೆಂಗಳೂರು: ಉಪ್ಪಾರಪೇಟೆಯಲ್ಲಿ ರಸ್ತೆ ದಾಟುತ್ತಿದ್ದ ಪಾದಚಾರಿಗೆ ಬಿಎಂಟಿಸಿ ಬಸ್‌ ಡಿಕ್ಕಿಯಾಗಿ ಬಾರ್‌ ಸಪ್ಲಯರ್‌ ಸ್ಥಳದಲ್ಲೇ ದುರ್ಮರಣ ಹೊಂದಿದ್ದಾರೆ.

Advertisement

ಶಿವಮೊಗ್ಗ ಜಿಲ್ಲೆ ಸೊರಬ ರವಿಕುಮಾರ್‌ (38) ಮೃತಪಟ್ಟವರು.

ವೈಟ್‌ಫೀಲ್ಡ್‌ನ ಬಾರ್‌ವೊಂದರಲ್ಲಿ ರವಿಕುಮಾರ್‌ ಸಪ್ಲೆಯರ್‌ ಆಗಿ ಕಾರ್ಯ ನಿರ್ವಹಿಸುತ್ತಿದ್ದರು. ಕೆಲಸದ ಹಿನ್ನೆಲೆಯಲ್ಲಿ ನೆಲ ಮಂಗಲಕ್ಕೆ ಹೋಗಿದ್ದರು. ಗುರುವಾರ ಮುಂಜಾನೆ ಮೆಜೆಸ್ಟಿಕ್‌ಗೆ ಬಂದು ಅಲ್ಲಿಂದ ವೈಟ್‌ಫೀಲ್ಡ್‌ನಲ್ಲಿರುವ ಮನೆಗೆ ತೆರಳಲು ಮುಂದಾಗಿದ್ದರು. ಮೆಜೆಸ್ಟಿಕ್‌ ಬಳಿ ಉಪ್ಪಾರಪೇಟೆಯಲ್ಲಿ ರಸ್ತೆ ದಾಟಲು ಮುಂದಾದ ವೇಳೆ ಬಿಎಂಟಿಸಿ 7ನೇ ಘಟಕಕ್ಕೆ ಸೇರಿದ ಬಸ್‌ವೊಂದು ಇವರಿಗೆ ಡಿಕ್ಕಿ ಹೊಡೆದಿದೆ.

ಡಿಕ್ಕಿ ಹೊಡೆದ ರಭಸಕ್ಕೆ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಉಪ್ಪಾರಪೇಟೆ ಸಂಚಾರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

Advertisement

Udayavani is now on Telegram. Click here to join our channel and stay updated with the latest news.

Next