Advertisement

ಜನ ಮತೀಯ ಶಕ್ತಿಗಳನ್ನು ಬೆಂಬಲಿಸಲ್ಲ: ಉಗ್ರಪ್ಪ

12:21 PM Mar 31, 2017 | |

ಮೈಸೂರು: ನಂಜನಗೂಡು ಮತ್ತು ಗುಂಡ್ಲುಪೇಟೆ ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಮತೀಯ ಶಕ್ತಿಯ ಜತೆಗಿನ ಸಂಘರ್ಷದಲ್ಲಿ ಜಾತ್ಯತೀತ ಪಕ್ಷವಾದ ಕಾಂಗ್ರೆಸ್‌ ಗೆಲುವು ಸಾಧಿಸಲಿದೆ ಎಂದು ವಿಪ ಸದಸ್ಯರುಗಳಾದ ಎಚ್‌.ಎಂ.ರೇವಣ್ಣ ಹಾಗೂ ವಿ.ಎಸ್‌. ಉಗ್ರಪ್ಪ ವಿಶ್ವಾಸ ವ್ಯಕ್ತಪಡಿಸಿದರು.

Advertisement

ನಗರದಲ್ಲಿ ಗುರುವಾರ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಎಚ್‌.ಎಂ.ರೇವಣ್ಣ, ಶ್ರೀನಿವಾಸ ಪ್ರಸಾದ್‌ ಕಂದಾಯ ಸಚಿವರಾಗಿ ಬರ ಪರಿಸ್ಥಿತಿಯನ್ನು ಸರಿಯಾಗಿ ನಿರ್ವಹಣೆ ಮಾಡಲಿಲ್ಲ. ಅನಾರೋಗ್ಯ ಕಾರಣದಿಂದ ಅವರಿಗೆ ಎಲ್ಲಡೆ ಪ್ರವಾಸ ಮಾಡಲೂ ಆಗಲಿಲ್ಲ. ಈ ಕಾರಣಕ್ಕಾಗಿ ಮಂತ್ರಿಮಂಡಲದಿಂದ ಕೈ ಬಿಟ್ಟರೆ, ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಉಪ ಚುನಾವಣೆ ತಂದಿದ್ದಾರೆ ಎಂದು ದೂರಿದರು.

ಅಹಿಂದ ವರ್ಗಗಳ ಬಗ್ಗೆ ಮಾತನಾಡಲು ಕೆ.ಎಸ್‌.ಈಶ್ವರಪ್ಪಗೆ ನೈತಿಕತೆ ಇಲ್ಲ. ಅಲ್ಪಸಂಖ್ಯಾತರನ್ನು ಬಿಟ್ಟು ಅಹಿಂದ ಮಾಡಲು ಹೋಗಿ ಈಗ ಎಲ್ಲವನ್ನೂ ಬಿಟ್ಟು ರಾಜಕೀಯ ಬೇಳೆ ಬೇಯಿಸಿಕೊಳ್ಳಲು ರಾಯಣ್ಣ ಬ್ರಿಗೇಡ್‌ ಮಾಡಲು ಹೊರಟಿದ್ದಾರೆ ಎಂದು ಟೀಕಿಸಿದರು.

ವಿ.ಎಸ್‌. ಉಗ್ರಪ್ಪಮಾತನಾಡಿ, ಉತ್ತರಪ್ರದೇಶ ದಲ್ಲಿ ಶೇ.61ರಷ್ಟು ಜಾತ್ಯತೀತ ಮತಗಳ ವಿಭಜನೆ ಯಿಂದಾಗಿ ಶೇ.39ರಷ್ಟು ಮತಗಳನ್ನು ಪಡೆದು ಅಧಿಕಾರಕ್ಕೆ ಬಂದು ಬಿಜೆಪಿ ನಾಯಕರು ಬೀಗುತ್ತಿದ್ದಾರೆ. ಬಸವಣ್ಣ, ಅಂಬೇಡ್ಕರ್‌, ಕನಕದಾಸರ ವಿಚಾರಗಳಿಂದ ಪ್ರೇರಿತರಾಗಿರುವ ಕರ್ನಾಟಕದ ಜನತೆ ಇಂತಹ ಮತೀಯ ಶಕ್ತಿಗಳಿಗೆ ಬೆಂಬಲ ನೀಡುವುದಿಲ್ಲ ಎಂದರು.

ನಂಜನಗೂಡು, ಗುಂಡ್ಲುಪೇಟೆ ಎರಡೂ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಗೆಲುವು ಸಾಧಿಸಲಿದೆ. ಈ ವಿಚಾರ ತಿಳಿದು ಬಿ.ಎಸ್‌. ಯಡಿಯೂರಪ್ಪಹಾಗೂ ಶ್ರೀನಿವಾಸಪ್ರಸಾದ್‌ ಹತಾಶರಾಗಿದ್ದಾರೆ. ಯಡಿಯೂರಪ್ಪ ಅವರಂತೂ ಲೋಕಸಭೆ ಅಧಿವೇಶನಕ್ಕೂ ಹೋಗದೆ ಇಲ್ಲಿ ಕುಳಿತಿದ್ದಾರೆ.

Advertisement

ಶ್ರೀನಿವಾಸಪ್ರಸಾದ್‌ ಸ್ವಾಭಿಮಾನದ ಪ್ರಶ್ನೆ ಎತ್ತಿದ್ದಾರೆ. ಆದರೆ, ನಿಜವಾಗಿ ಸ್ವಾಭಿಮಾನದ ಪ್ರಶ್ನೆ ಎತ್ತಬೇಕಾದವರು ನಂಜನಗೂಡಿನ ಮತದಾರರು ಹಾಗೂ ಕಾಂಗ್ರೆಸ್‌ ಕಾರ್ಯಕರ್ತರು, ಮಂತ್ರಿ ಆಗಲಿ ಎಂದು ನಂಜನಗೂಡಿನ ಜನತೆ ಇವರಿಗೆ ಮತ ನೀಡಿರಲಿಲ್ಲ. ಐದು ವರ್ಷ ನಮ್ಮ ಶಾಸಕರಾಗಿರಿ ಎಂದು ಮತ ನೀಡಿದ್ದರು.

ಆದರೆ, ತಾತ್ವಿಕ ಕಾರಣವಿಲ್ಲದೆ ರಾಜೀನಾಮೆ ನೀಡಿ ನಂಜನಗೂಡಿನ ಜನರ ಆದೇಶ ಮತ್ತು ಕಾರ್ಯಕರ್ತರ ಶ್ರಮಕ್ಕೆ ಪ್ರಸಾದ್‌ ದ್ರೋಹ ಬಗೆದಿದ್ದಾರೆ. ಕಂದಾಯ ಹಾಗೂ ಜಿಲ್ಲಾ ಉಸ್ತುವಾರಿ ಮಂತ್ರಿಯಾಗಿ ನಂಜನಗೂಡು ಕ್ಷೇತ್ರ, ಮೈಸೂರು ಜಿಲ್ಲೆ ಹಾಗೂ ರಾಜ್ಯದಲ್ಲಿ ಪ್ರಸಾದ್‌ ಏನೆಲ್ಲಾ ಹೆಜ್ಜೆಗುರುತುಗಳನ್ನು ಬಿಟ್ಟು ಹೋಗಿದ್ದಾರೆ ಎಂದು ಹೇಳಲಿ ಎಂದು ಪ್ರಶ್ನಿಸಿದರು.

ಯಡಿಯೂರಪ್ಪಮೇಲೆ ಇನ್ನೂ 20 ಕೇಸ್‌ ಇದೆ. ಜೈಲಿಗೆ ಹೋಗಿ ಬಂದಿದ್ದಾರೆ. ಆಡಳಿತಾವಧಿಯಲ್ಲಿ ಮಾಡಬಾರದ್ದನ್ನೆಲ್ಲಾ ಮಾಡಿ ರಾಜ್ಯದ ಮರ್ಯಾದೆ ತೆಗೆದಿರುವ ಯಡಿಯೂರಪ್ಪ, ಮುಂದಿನ ಮುಖ್ಯ ಮಂತ್ರಿ ನಾನೇ ಎಂದು ಓಡಾಡುತ್ತಿದ್ದಾರೆ. ಒಂದು ವೇಳೆ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೂ ಯಡಿಯೂರಪ್ಪಗೆ ಅಧಿಕಾರ ಕೊಡುವುದಿಲ್ಲ ಎಂದರು. ಮೈಲ್ಯಾಕ್‌ ಅಧ್ಯಕ್ಷ ಎಚ್‌.ಎ.ವೆಂಕಟೇಶ್‌, ಮೃಗಾಲಯ ಪ್ರಾಧಿಕಾರ ಅಧ್ಯಕ್ಷೆ ಮಲ್ಲಿಗೆ ವೀರೇಶ್‌, ನಗರ ಕಾಂಗ್ರೆಸ್‌ ಅಧ್ಯಕ್ಷ ಮೂರ್ತಿ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next