Advertisement

Belthangady ಚೂರಿಯಿಂದ ಇರಿದು ತಂದೆಯಿಂದ ಮಗನ ಕೊಲೆ

11:21 PM Oct 30, 2023 | Team Udayavani |

ಬೆಳ್ತಂಗಡಿ: ಉಜಿರೆ ಗ್ರಾಮದ ಶ್ರೀ ಲಕ್ಷ್ಮೀನಿವಾಸ ಕೊಡೆಕಲ್ಲು ಎನ್ನುವಲ್ಲಿ ವೃದ್ಧರೋರ್ವರು ತನ್ನ ಮಗನನ್ನೇ ಇರಿದು ಕೊಲೆ ಮಾಡಿದ ಘಟನೆ ಅ. 29ರಂದು ರಾತ್ರಿ ನಡೆದಿದೆ.

Advertisement

ಕೊಡೆಕಲ್ಲು ನಿವಾಸಿ ಜಗದೀಶ್‌ (30) ಮೃತ ವ್ಯಕ್ತಿ. ಅವರ ತಂದೆ ಬಿ.ಕೆ. ಕೃಷ್ಣಯ್ಯ ಆಚಾರ್ಯ (74) ಕೊಲೆ ಮಾಡಿದ ಆರೋಪಿ.

ಅ. 29ರಂದು ರಾತ್ರಿ 9 ಗಂಟೆ ವೇಳೆಗೆ ತಂದೆ ಕೃಷ್ಣಯ್ಯ ಆಚಾರ್ಯ ಮತ್ತು ಮಗ ಜಗದೀಶನ ಮಧ್ಯೆ ಮಾತಿನ ಜಗಳವಾಗಿದೆ. ತಂದೆ ಮನೆಯ ಒಳಗಡೆ ಕೋಣೆಗೆ ತೆರಳಿ ಬಾಗಿಲು ಹಾಕಿದಾಗ, ಮಗ ಜಗದೀಶ ವೈದ್ಯಕೀಯ ಚಿಕಿತ್ಸೆಯ ದಾಖಲೆಗಳನ್ನು ಕೊಡುವಂತೆ ಕೇಳಿ ತಂದೆ ಮಲಗಿದ್ದ ಕೋಣೆ ಬಾಗಿಲನ್ನು ಕಾಲಿನಿಂದ ತುಳಿದು ಒಡೆದು ಒಳಗಡೆ ಹೋಗಲು ಪ್ರಯತ್ನಿಸುತ್ತಿದ್ದ. ಈ ವೇಳೆ ತಂದೆ ಅಲ್ಲೇ ಕಪಾಟಿನಲ್ಲಿದ್ದ ಚೂರಿಯನ್ನು ತೆಗೆದು ಬಾಗಿಲ ಬಳಿ ಬಂದು ಮಗ ಜಗದೀಶ್‌ನ ಎಡ ಭುಜಕ್ಕೆ ಹಾಗೂ ಎಡ ಎದೆ ಭಾಗಕ್ಕೆ ಇರಿದಿದ್ದರು.

ಇದರಿಂದ ಗಂಭೀರವಾಗಿ ಗಾಯಗೊಂಡ ಜಗದೀಶ್‌ನನ್ನು ತತ್‌ಕ್ಷಣ ಚಿಕಿತ್ಸೆ ಸಲುವಾಗಿ ಆಸ್ಪತ್ರೆಗೆ ಕರೆದೊಯ್ದರೂ, ಅದಾಗಲೇ ಆತ ಮೃತಪಟ್ಟಿದ್ದ. ಈ ಕುರಿತು ಮೃತನ ಅಣ್ಣ ನೀಡಿದ ದೂರಿನಂತೆ ಬೆಳ್ತಂಗಡಿ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next