Advertisement

Belthangady ತಾಯಿ, ಮಗನ ಮೇಲೆ ಸಂಬಂಧಿಕರಿಂದ ಹಲ್ಲೆ

11:00 PM May 01, 2024 | Team Udayavani |

ಬೆಳ್ತಂಗಡಿ: ಕಳೆಂಜ ಗ್ರಾಮದ ಸೇಸಮ್ಮ ಮತ್ತು ಪುತ್ರನ ಮೇಲೆ ಸಂಬಂಧಿಕರು ಹಲ್ಲೆ ನಡೆಸಿ ರುವ ಕುರಿತು ದೂರು ದಾಖಲಾಗಿದೆ.

Advertisement

ಸೇಸಮ್ಮ ಅವರು ಕಿರಿಯ ಪುತ್ರ ಹರೀಶನೊಂದಿಗೆ ಕಲ್ಮಂಜದಲ್ಲಿ ವಾಸ ವಾಗಿದ್ದು, ಎ. 30ರ ರಾತ್ರಿ ಪೂಜೆಯ ನಿಮಿತ್ತ ಕುಟುಂಬಸ್ಥರಿಗೆ ಊಟದ ವ್ಯವಸ್ಥೆ ಏರ್ಪಡಿಸಿದ್ದರು. ಆಗ ಕುಟುಂಬಸ್ಥರಾದ ಯೋಗೀಶ್‌, ಆನಂದ ಬೀಜದಡಿ, ಶೇಖರ್‌, ಆನಂದ ಕುಲಾಡಿ, ಅಣ್ಣು ಗೌಡ, ಹರೀಶ್‌ ಮತ್ತು ಪುಷ್ಪಾ ಅವರು ಪುತ್ರ ಹರೀಶನನ್ನು ಉದ್ದೇಶಿಸಿ ಅವಾಚ್ಯ ಶಬ್ದಗಳಿಂದ ಬೈದರು. ಸ್ವಲ್ಪ ಸಮಯದ ಬಳಿಕ ಯೋಗೀಶನು ಹರೀಶ ಹಾಗೂ ಆತನ ಭಾವ ದೀಕ್ಷಿತ್‌ ಅವರ ಮೇಲೆ ಹಲ್ಲೆ ನಡೆಸಿದನು. ತಡೆಯಲು ಬಂದ ಸೇಸಮ್ಮ ಅವರನ್ನು ತಳ್ಳಿ ಗಾಯಗೊಳಿಸಿ, ಬೆದರಿಕೆ ಹಾಕಿದ್ದಾನೆ ಎಂದು ಧರ್ಮಸ್ಥಳ ಠಾಣೆಯಲ್ಲಿ ದೂರು ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next