Advertisement

ಬೆಳ್ತಂಗಡಿ: ಕುಡುಕರ ವಿಶ್ರಾಂತಿ ತಾಣ ಆಗುತ್ತಿರುವ ಉಜಿರೆ ವೃತ್ತ!

02:22 PM Jun 21, 2024 | Team Udayavani |

ಬೆಳ್ತಂಗಡಿ: ರಾಷ್ಟ್ರೀಯ ಹೆದ್ದಾರಿಯ ಬೆಳ್ತಂಗಡಿ, ಚಾರ್ಮಾಡಿ ಹಾಗೂ ಧರ್ಮಸ್ಥಳವನ್ನು ಜೋಡಿಸುವ ಉಜಿರೆ ಪ್ರಧಾನ ಸಂಪರ್ಕ ಕೇಂದ್ರವಾಗಿ ಬೆಳೆಯುತ್ತಿದೆ. ಉಜಿರೆ ಬೆಳೆದಂತೆ ಬಸ್‌ ನಿಲ್ದಾಣ, ಮುಖ್ಯ ವೃತ್ತ ಹಾಗೂ ಧರ್ಮಸ್ಥಳ ಮಹಾದ್ವಾರ ಕುಡುಕರ ವಿಶ್ರಾಂತಿ ತಾಣವಾಗುತ್ತಿದೆ.

Advertisement

ದಿನಬೆಳಗಾದರೆ ರಸ್ತೆಯ ಎರಡು ಬದಿಗಳಲ್ಲಿ ಕುಡುಕರ ಹಾವಳಿಯಿಂದ ಬಸ್‌ ನಿಲ್ದಾಣದಲ್ಲಿ ವಿದ್ಯಾರ್ಥಿ ಗಳಿಗೆ, ಮಹಿಳೆಯರಿಗೆ ಕಿರಿಕಿರಿ ತಂದೊಡ್ಡುವಂತಾಗಿದೆ. ಉಜಿರೆ ಮುಖ್ಯ ವೃತ್ತವನ್ನೂ ವಿಶ್ರಾಂತಿ ತಾಣವನ್ನಾಗಿಸುತ್ತಿದ್ದಾರೆ. ಹೆಂಗಸರು, ಮಕ್ಕಳು ಓಡಾಡುವ ಹೆದ್ದಾರಿ ಬದಿ ಕುಡುಕರ ಈ ವರ್ತನೆಯಿಂದ ಜನರು ಬೇಸತ್ತಿದ್ದಾರೆ.

ಕುಡುಕರು ರಸ್ತೆಯಲ್ಲೇ ತೂರಾಡುತ್ತಾ ಸಂಚರಿಸುತ್ತಿರುವ ಪರಿಣಾಮ ಅತೀ ಹೆಚ್ಚು ಪ್ರವಾಸಿಗರು ಸಹಿತ ಸಾರ್ವಜನಿಕ ವಾಹನ
ಸಂಚಾರವಿರುವ ಈ ಪ್ರದೇಶ ಅಪಘಾತಕ್ಕೆ ಆಹ್ವಾನಿಸುವಂತಿದೆ.

ನಿರ್ಗತಿಕರ ರಕ್ಷಣೆ, ಪುನರ್ವಸತಿ ಸಹಿತ ಇತರ ವಿಚಾರಗಳಿಗೆ ಗ್ರಾಮ ಪಂಚಾಯತ್‌ ಗಳಿಗೆ ಅನುದಾನ ಸರಕಾರದಿಂದ
ಬರುತ್ತದೆ. ಆದರೆ ಇದರ ಸದ್ಬಳಕೆ ಆಗುತ್ತಿಲ್ಲವೇ ಎಂಬ ಅನುಮಾನವನ್ನು ಜನರು ವ್ಯಕ್ತಪಡಿಸಲಾರಂಭಿಸಿದ್ದಾರೆ.
ಮುಂದೆಯಾದರೂ ಉಜಿರೆ ಗ್ರಾ.ಪಂ., ಪೊಲೀಸ್‌ ಇಲಾಖೆ ಇಂತವರ ಬಗೆಗೆ ಜಾಗೃತಿ, ಎಚ್ಚರಿಕೆ ಕ್ರಮ ಕೈಗೊಳ್ಳಬೇಕು
ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next