Advertisement

ಸವಾರರಿಗೆ ಮಾರಕವಾದ ಹೊಳೆ ಬೆಳ್ಳೂರು ರಸ್ತೆ

02:59 PM Sep 29, 2021 | Team Udayavani |

ಆಲೂರು: ಮೂರ್ನಾಲ್ಕು ವರ್ಷಗಳಿಂದ ತಾಲೂಕಿನ ಹೊಳೆ ಬೆಳ್ಳೂರು ರಸ್ತೆಯಲ್ಲಿ ಅಪಾರ ಪ್ರಮಾಣದ ಗುಂಡಿ ಬಿದ್ದು ಜನಸಾಮಾನ್ಯರು ಓಡಾಡಲು ತುಂಬಾತೊಂದರೆ ಅನುಭವಿಸುತ್ತಿದ್ದಾರೆ. ಆದರೂ, ಸಂಬಂಧಪಟ್ಟ ಇಲಾಖೆ ಅಧಿಕಾರಿಗಳಾಗಲಿ, ಜನಪ್ರತಿನಿಧಿಗಳಾಗಲಿ ಇತ್ತ ಗಮನ ಹರಿಸುತ್ತಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ.

Advertisement

ಸಂಬಂಧ ಇಲಾಖೆ ಗಮನಹರಿಸಲಿ: ಆಲೂರು ಪಟ್ಟಣಕ್ಕೆ 5 ಕಿ.ಮೀ.ದೂರದಲ್ಲಿರುವ ಹೊಳೆ ಬೆಳ್ಳೂರುರಸ್ತೆ ಈ ಹಿಂದೆ ಸಂಪೂರ್ಣವಾಗಿ ಗುಂಡಿ ಬಿದ್ದ ಹಿನ್ನೆಲೆ 3-4 ವರ್ಷಗಳ ಹಿಂದೆ ಬಂಡಿ ತಿಮ್ಮನಹಳ್ಳಿ, ಚಿಕ್ಕಣಗಾಲು ಹೊಸಳ್ಳಿ, ಕುಂಬಾರಹಳ್ಳಿ, ಕುಂಬಾರಹಳ್ಳಿಕೊಪ್ಪಲು, ನಾಕಲಗೋಡು ಕೊಪ್ಪಲು ಗ್ರಾಮಸ್ಥರು ಪ್ರತಿಭಟನೆ ನಡೆಸಿದ್ದರು. ಅಲ್ಲದೇ, ಪಕ್ಕದಲ್ಲಿಎತ್ತಿನಹೊಳೆ ಕಾಲುವೆ ಹಾದು ಹೋಗಿರುವುದರಿಂದರಸ್ತೆಯಲ್ಲಿ ಎತ್ತಿನ ಹೊಳೆ ಇಲಾಖೆಗೆ ಸೇರಿದ ವಾಹನಗಳು ಓಡಾಡುವುದರಿಂದ ರಸ್ತೆ ಸಂಪೂರ್ಣವಾಗಿ ಹಾಳಾಗಿ ಹೋಗಿದ್ದು ಸಂಬಂಧಪಟ್ಟ ಇಲಾಖೆ ರಸ್ತೆ ಅಭಿವೃದ್ಧಿ ಪಡಿಸಬೇಕೆಂದು ಒತ್ತಾಯಿಸಿದ್ದರು. ಈ ಹಿನ್ನೆಲೆ 3-4 ವರ್ಷಗಳ ಹಿಂದೆಎತ್ತಿನಹೊಳೆ ಯೋಜನೆ ಇಲಾಖೆ 3 ಕೋಟಿ ರೂ.ವೆಚ್ಚದಲ್ಲಿ ಗೇಕರವಳ್ಳಿ ಕೆರೆ ಏರಿಗೆ ಕಾಂಕ್ರಿಟ್‌ ರಸ್ತೆ ನಿರ್ಮಾಣ ಮಾಡಲಾಗಿದೆ.

ರಸ್ತೆ ಸಮಸ್ಯೆಯಿಂದ 3 ವರ್ಷಗಳಿಂದ ಬಸ್‌ ಬರುತ್ತಿಲ್ಲ  :

ಕೆರೆಯ ಎಡ ಭಾಗದಲ್ಲಿ ಆಳವಾದ ಕೆರೆ ಬಲ ಭಾಗದಲ್ಲಿ ಆಳವಾದ ಗದ್ದೆ ಹಳ್ಳ ಇರುವುದರಿಂದ ಜನಸಾಮಾನ್ಯರು ಕೆರೆ ಏರಿ ಮೇಲೆ ಓಡಾಡಲು ಭಯ ಪಡುವಂತಾಗಿದೆ. ಹೀಗಾಗಿ ಹೊಳೆ ಬೆಳ್ಳೂರಿಗೆ ಬರುತ್ತಿದ್ದ ಬಸ್‌ 3 ವರ್ಷಗಳಿಂದಲೂ ನಿಂತು ಹೋಗಿದ್ದು ಜನ ಸಾಮಾನ್ಯರು ಸುತ್ತಿ ಬಳಸಿ ಓಡಾಡುವ ಸ್ಥಿತಿ ನಿರ್ಮಾಣವಾಗಿದೆ. ರಸ್ತೆಯಲ್ಲಿ ಯಾವುದೇ ವಾಹನ ಸವಾರರು ಬರುತ್ತಿಲ್ಲ. ಒಂದು ವೇಳೆ ಬಂದರೂ ರಸ್ತೆ ಗುಂಡಿಯೊಳಗೆ ಬಿದ್ದು ಎಷ್ಟೋ ವಾಹನ ಸವಾರರು ಕೈ ಕಾಲು ಕಳೆದುಕೊಂಡಿದ್ದಾರೆ. ಇನ್ನೂ ಕೆಲವರು ಪ್ರಾಣ ಕಳೆದುಕೊಂಡಿದ್ದಾರೆಂದು ಸ್ಥಳೀಯರೇ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಇನ್ನುಳಿದ ಕಾಮಗಾರಿ ಮುಗಿಸಲಿ:

Advertisement

ತಾಲೂಕಿನ ಹೊಳೆಬೆಳ್ಳೂರು ರಸ್ತೆ ಸಂಪೂರ್ಣವಾಗಿ ಹಾಳಾದ ಹಿನ್ನೆಲೆ ಜನಸಾಮಾನ್ಯರು ರಸ್ತೆಯಲ್ಲಿ ಓಡಾಡಲು ತುಂಬಾ ತೊಂದರೆಯಾಗಿದೆ. ಈ ಭಾಗದ ಜನಸಾಮಾನ್ಯರ ಹೋರಾಟದ ಫ‌ಲವಾಗಿ ಎತ್ತಿನಹೊಳೆ ಇಲಾಖೆ ವತಿಯಿಂದ ಗೇಕರವಳ್ಳಿ ಕೆರೆ ಏರಿ ಮೇಲೆ ಕಾಂಕ್ರೀಟೀಕರಣ ಮಾಡಲಾಗಿದೆ.ಇನ್ನುಳಿದ ಕಾಮಗಾರಿ ಆದಷ್ಟು ಬೇಗ ಕಾಮಗಾರಿ ಕೈಗೆತ್ತಿಕೊಳ್ಳಬೇಕು ಎಂದು ತಾಪಂ ಮಾಜಿ ಸದಸ್ಯ ನಟರಾಜ್‌ ನಾಕಲಗೊಡು ಒತ್ತಾಯಿಸಿದ್ದಾರೆ.

ಬಿಕ್ಕೋಡು ರಸ್ತೆಯಿಂದ ಹೊಳಬೆಳ್ಳೂರು ಗ್ರಾಮದವರೆಗೆ ರಸ್ತೆ ಸಂಪೂರ್ಣವಾಗಿ ಗುಂಡಿ ಬಿದ್ದು ಓಡಾಡದಂತಹ ಸ್ಥಿತಿನಿರ್ಮಾಣವಾಗಿದೆ. ಈ ಭಾಗದ ಜನಸಾಮಾನ್ಯರ ಹೋರಾಟದಫ‌ಲವಾಗಿ ಗೇಕರವಳ್ಳಿ ಕೆರೆ ಏರಿ ಮೇಲೆ ಕೇವಲ 750 ಮೀ.ಮಾತ್ರ ಕಾಂಕ್ರಿಟ್‌ ರಸ್ತೆ ನಿರ್ಮಾಣವಾಗಿದೆ. ಆದರೆ ಕೆರೆ ಏರಿ ರಸ್ತೆಯ ಇಕ್ಕೆಲಗಳಲ್ಲಿ ತಡೆಗೊಡೆ ನಿರ್ಮಾಣವಾಗಬೇಕಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ಈ ಬಗ್ಗೆ ಗಮನ ಹರಿಸಬೇಕು. – ವೀಣಾ, ಹುಣಸವಳ್ಳಿ ಗ್ರಾಪಂ ಸದಸ್ಯೆ

 

– ಟಿ.ಕೆ.ಕುಮಾರಸ್ವಾಮಿ ಟಿ.ತಿಮ್ಮನಹಳ್ಳಿ

Advertisement

Udayavani is now on Telegram. Click here to join our channel and stay updated with the latest news.

Next