Advertisement

ವಿವಿಧ ತಾಂಡಾ ನಿವಾಸಿಗಳಿಂದ ಪ್ರತಿಭಟನೆ

04:57 PM Jun 11, 2020 | Naveen |

ಬಳ್ಳಾರಿ: ಲಂಬಾಣಿ, ಭೋವಿ, ಕೊರವ, ಕೊರಚ ಜಾತಿಗಳನ್ನು ಪರಿಶಿಷ್ಟ ಜಾತಿ ಪಟ್ಟಿಯಿಂದ ಕೈಬಿಡದಂತೆ ಒತ್ತಾಯಿಸಿ ಜಿಲ್ಲೆಯ ವಿವಿಧ ತಾಂಡಾಗಳ ನಿವಾಸಿಗಳು ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರಿಗೆ ಪತ್ರ ಬರೆಯುವ ಮೂಲಕ ಬುಧವಾರ ಪತ್ರಚಳವಳಿ ನಡೆಸಿದರು.

Advertisement

ನಗರದ ಪ್ರಧಾನ ಅಂಚೆ ಕಚೇರಿ ಬಳಿ ಜಮಾಯಿಸಿದ ನೂರಾರು ಲಂಬಾಣಿ ಸಮುದಾಯದವರು, ಲಂಬಾಣಿ, ಭೋವಿ, ಕೊರಚ, ಕೊರಮ ಸಮುದಾಯಗಳು ಪರಿಶಿಷ್ಟ ಜಾತಿ ಪಟ್ಟಿಯಲ್ಲೇ ಉಳಿಯಬೇಕು ಎಂದು ಒತ್ತಾಯಿಸಿ ಸಿಎಂ ಅವರಿಗೆ ಪತ್ರ ಬರೆಯುವ ಮೂಲಕ ಪತ್ರ ಚಳವಳಿ ಅಭಿಯಾನ ನಡೆಸಿದರು. ಈ ವೇಳೆ ಲಂಬಾಣಿ ಸಮುದಾಯದ ಮುಖಂಡ ಗೋವಿಂದ್‌ ನಾಯ್ಕ ಮಾತನಾಡಿ, ಲಂಬಾಣಿ, ಭೋವಿ, ಕೊರವ, ಕೊರಚ ಜಾತಿಗಳನ್ನು ಪರಿಶಿಷ್ಟ ಜಾತಿಯಿಂದ ಕೈಬಿಡದಂತೆ ಮುಖ್ಯಮಂತ್ರಿಗಳು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಜಿಲ್ಲೆಯ ಬೆಳಗಲ್‌ ತಾಂಡಾ, ಜಾನೆಕುಂಟೆ ತಾಂಡಾ, ಬೆಳಗಲ್‌ ಕ್ರಾಸ್‌ ಭಾಗದ ಲಂಬಾಣಿ ಸಮುದಾಯದ ನೂರಾರು ಜನರು ಈ ಪತ್ರ ಚಳವಳಿಯಲ್ಲಿ ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next